Advertisement

ಲೋಕ್‌ಪಾಲ್‌ ಬಿಲ್‌: ಮಾಸ್‌ ಇಂಡಿಯಾ ಉಪವಾಸ ಸತ್ಯಾಗ್ರಹ

07:50 AM Mar 29, 2018 | Team Udayavani |

ಉಡುಪಿ: ರಾಷ್ಟ್ರದಲ್ಲಿ ಲೋಕ್‌ಪಾಲ್‌ ಬಿಲ್‌ ಜಾರಿಗೆ ಬರಬೇಕು ಎಂದು ಆಗ್ರಹಿಸಿ ಮಾ. 28ರಂದು ಮಾಸ್‌ ಇಂಡಿಯಾ ಮಾಹಿತಿ ಸೇವಾ ಸಮಿತಿಯ ವತಿಯಿಂದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು.

Advertisement

ಭ್ರಷ್ಟಾಚಾರ ಮುಕ್ತ ರಾಷ್ಟ್ರವಾಗಬೇಕು. ರೈತರ ಜೀವನ ಹಸನಾಗಬೇಕು. ಲೋಕ್‌ಪಾಲ್‌ಗಾಗಿ ಅಣ್ಣಾ ಹಜಾರೆಯವರು ಹೊಸ ದಿಲ್ಲಿಯಲ್ಲಿ ಮಾಡುತ್ತಿರುವ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಲೋಕ್‌ಪಾಲ್‌ ಬಿಲ್‌ ಬಾರದೇ ಇದ್ದರೆ ಈ ದೇಶದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಹೀಗಾಗಿ ಲೋಕ್‌ಪಾಲ್‌ಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮಾಸ್‌ ಇಂಡಿಯಾ ಸಂಸ್ಥೆಯ ರಾಜ್ಯಾಧ್ಯಕ್ಷ ಜಿ.ಎ. ಕೋಟೆಯಾರ್‌ ಅವರು ಹೇಳಿದರು.

ಮಾಸ್‌ ಇಂಡಿಯಾ ಸಂಸ್ಥೆಯ ಕಾರ್ಯದರ್ಶಿ ಎಂ. ಮಹೇಶ್‌, ಕಾಪು ವಿಭಾಗದ ಅಧ್ಯಕ್ಷ ಚಂದ್ರಶೇಖರ್‌, ಸಲಹೆಗಾರ್ತಿ ಕಾವೇರಿ ಆರ್‌. ರಾವ್‌, ಮಣಿಪಾಲ ವಿಭಾಗದ ಅಧ್ಯಕ್ಷ ನರಸಿಂಹಮೂರ್ತಿ, ಶ್ರೀಧರ ಭಟ್‌ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next