Advertisement

ಚುನಾವಣ ಕರ್ತವ್ಯ ನಿರತರೊಂದಿಗೆ ವೀಕ್ಷಕರ ಸಭೆ

01:04 AM Apr 06, 2019 | Team Udayavani |

ಮಂಗಳೂರು: ಸುಗಮ ಚುನಾವಣೆಗಾಗಿ ಚುನಾವಣ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತದೆ. ಇದಕ್ಕೆ ಚುನಾವಣ ಅಧಿಕಾರಿ, ಸಿಬಂದಿಯೊಂದಿಗೆ ತಾಂತ್ರಿಕವಾಗಿಯೂ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

Advertisement

ವೀಕ್ಷಕರು ಮತ್ತು ಸಹಾಯಕ ಚುನಾವಣ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಬುಧವಾರ ವೀಕ್ಷಕರ ಸಮ್ಮುಖ ಎರಡನೇ ಸುತ್ತಿನ ಮತಯಂತ್ರ ರ್‍ಯಾಂಡಮೈಸೇಶನ್‌ ನಡೆಸಲಾಗಿದ್ದು, ಚುನಾವಣೆ ಕೆಲಸ ಸುಸೂತ್ರವಾಗಿ ನಡೆಸಲು ಪಿಆರ್‌ಒ, ಎಪಿಆರ್‌ಒಗಳು ಮತ್ತು ಎಲ್ಲ ಮತಗಟ್ಟೆ ಸಿಬಂದಿಗೆ ಕಲ್ಯಾಣ ಕಾರ್ಯಕ್ರಮದಡಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳ ಲಾಗಿದೆ. ವೈದ್ಯಕೀಯ ಕಿಟ್‌ ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು, ವಾಹನ ಮತ್ತು ತಂಗುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಈಗಾಗಲೇ ಖಾತರಿ ಪಡಿಸಲಾಗಿದೆ ಎಂದರು.

ಮತದಾನದ ದಿನದಂದು ವೆಬ್‌ ಕೆಮರಾ ಒಳಗೊಂಡಂತೆ ಸೆಟಲೈಟ್‌ ಮ್ಯಾಪ್‌ ಮೂಲಕ ಎಲ್ಲ ಮತಗಟ್ಟೆಗಳಿಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. 640 ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಈ ಬಾರಿ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆಯ ಜತೆಗೆ ಮೈಕ್ರೋ ವೀಕ್ಷಕರು, ಅರೆ ಸೇನಾ ಸಿಬಂದಿ, ವೀಡಿಯೋಗ್ರಾಫರ್‌ಗಳನ್ನು ನಿಯೋ ಜಿಸ ಲಾಗುವುದು ಎಂದರು. ಚುನಾವಣ ಅಕ್ರಮ ತಡೆಗೆ ಚೆಕ್‌ಪೋಸ್ಟ್‌ ನಿರ್ಮಾಣ, ಈ ಚೆಕ್‌ಪೋಸ್ಟ್‌ಗಳನ್ನು ಕಂಟ್ರೋಲ್‌ ರೂಂನಲ್ಲಿ ವೀಕ್ಷಿಸುವ ವ್ಯವಸ್ಥೆಗಳನ್ನು ವಿವರಿಸಲಾಯಿತು. ತಾರಾ ಪ್ರಚಾರಕರು ಆಗಮಿಸುವ ವೇಳೆ ಮಾದರಿ ನೀತಿ ಅನುಷ್ಠಾನಕ್ಕೆ ಫ್ಲೈಯಿಂಗ್‌ ಸ್ಕ್ವಾಡ್‌ಗಳಿಗೆ ವಯರ್‌ ಲೆಸ್‌ ವ್ಯವಸ್ಥೆಯನ್ನು ಒದಗಿಸ ಲಾಗುವುದು. ಇವರು ಪೊಲೀಸ್‌ ವ್ಯವಸ್ಥೆಯೊಂದಿಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸುವರು ಎಂದು ಶಶಿಕಾಂತ ಸೆಂಥಿಲ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next