Advertisement

ನಿಗದಿತ ವೇಳೆಯಲ್ಲೇ ಲೋಕ ಚುನಾವಣೆ

12:30 AM Mar 02, 2019 | Team Udayavani |

ಲಕ್ನೋ: ಲೋಕಸಭೆ ಚುನಾವಣೆಯು ನಿಗದಿತ ಸಮಯದಲ್ಲೇ ನಡೆಯಲಿದೆ ಎಂದು ಚುನಾವಣ ಆಯೋಗ ಸ್ಪಷ್ಟಪಡಿಸಿದೆ. ಭಾರತ- ಪಾಕಿಸ್ಥಾನ ನಡುವೆ ವಾತಾವರಣ ಉದ್ವಿಗ್ನ ವಾಗಿರುವ ಹಿನ್ನೆಲೆಯಲ್ಲಿ ಚುನಾವಣ ದಿನಾಂಕ ಮುಂದೂಡಲ್ಪಡುವುದೇ ಎಂಬ ಅನುಮಾನ ಮೂಡಿದ ಕಾರಣ ಆಯೋಗವು ಈ ಸ್ಪಷ್ಟನೆ ನೀಡಿದೆ. ಮುಖ್ಯ ಚುನಾವಣ ಆಯುಕ್ತ ಸುನೀಲ್‌ ಅರೋರಾ ಮಾತನಾಡಿ, ದೇಶದ ಮುಂದಿನ ಲೋಕಸಭೆ ಚುನಾವಣೆಯನ್ನು ನಿಗದಿತ ಸಮಯದಲ್ಲೇ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಆಯೋಗದ ಹೊಸ ಅಧಿ ಸೂಚನೆಯ ಪ್ರಕಾರ, ಅಭ್ಯರ್ಥಿಯು ದೇಶದಲ್ಲಿರುವ ಆಸ್ತಿ ಮಾತ್ರವಲ್ಲದೆ, ವಿದೇಶಗಳಲ್ಲಿರುವ ಸ್ವತ್ತುಗಳ ಮಾಹಿತಿಯನ್ನೂ ಒದಗಿಸಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next