Advertisement

Lok Sabha Polls: ಕೇರಳದಿಂದ  ಆ್ಯಂಟನಿ ಪುತ್ರ ಬಳಿಕ ಕ‌ರುಣಾಕರನ್‌ ಪುತ್ರಿ ಬಿಜೆಪಿಗೆ?

08:58 PM Mar 07, 2024 | Team Udayavani |

ತಿರುವನಂತಪುರ: ಕೇರಳದ ಕಾಂಗ್ರೆಸ್‌ ನಾಯಕ ದಿ. ಕೆ.ಕರುಣಾಕರನ್‌ ಪುತ್ರಿ ಪದ್ಮಜಾ ವೇಣುಗೋಪಾಲ್‌ ಬಿಜೆಪಿಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ.

Advertisement

ಈ ಬಗ್ಗೆ ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಪದ್ಮಜಾ ಭೇಟಿಯಾಗಿದ್ದಾರೆ. ಸದ್ಯ ಅವರು, ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ.

ಕಳೆದ ಏಪ್ರಿಲ್‌ನಲ್ಲಿ ಮಾಜಿ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ ಬಿಜೆಪಿ ಸೇರ್ಪಡೆಯಾಗಿದ್ದರು. .ಇದೀಗ ಕೇರಳದಿಂದ ಕಾಂಗ್ರೆಸ್‌ನ ಮತ್ತೂಬ್ಬ ಹಿರಿಯ ನಾಯಕನ ಪುತ್ರಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. “ಪದ್ಮಜಾ ಬಿಜೆಪಿ ಸೇರುವುದು ಕಾಂಗ್ರೆಸ್‌ಗೆ ಮಾಡುವ ದ್ರೋಹ’ ಎಂದು ಅವರ ಸಹೋದರ ಕೆ.ಮುರಳೀಧರನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next