Advertisement

Lok Sabha Polls:ಕಾಂಗ್ರೆಸ್‌ ನಾಯಕ ಗಿರೀಶ್‌ ಚೋಡಣಕರ್‌ ಪ್ರಚಾರ ಆರಂಭ

09:27 PM Mar 31, 2024 | Team Udayavani |

ಪಣಜಿ: ದಕ್ಷಿಣ ಗೋವಾಕ್ಕೆ ಭಾರತ ಮೈತ್ರಿಕೂಟದ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಯಾಗಿ  ಗಿರೀಶ್‌ ಚೋಡಣಕರ್‌ ಪ್ರಚಾರ ಆರಂಭಿಸಿದ್ದಾರೆ.

Advertisement

ಅವರು ಕಾಣಕೋಣಗೆ ಭೇಟಿ ನೀಡಿ ಸ್ಥಳೀಯ ಕಾಂಗ್ರೆಸ್‌ ಮತ್ತು ಗೋವಾ ಫಾರ್ವರ್ಡ್‌ ಪಕ್ಷದ ನಾಯಕರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಈ ನಡುವೆ ಆಮ್‌ ಆದ್ಮಿ ಪಕ್ಷದ ನಾಯಕರು ಕೂಡ ಮಡಗಾಂವ್‌ನಿಂದ ಪ್ರಚಾರ ಆರಂಭಿಸಿದ್ದಾರೆ. ಅಭ್ಯರ್ಥಿಯನ್ನು ಲೆಕ್ಕಿಸದೆ ನಮ್ಮ ಪ್ರಚಾರ ನಡೆಯುತ್ತಿದೆ ಎಂದು ಎಎಪಿ ಶಾಸಕ ವೆಂಜಿ ವಿಗಾಸ್‌ ಹೇಳಿದ್ದಾರೆ.

ಚೋಡಣಕರ್‌ ಅವರು ಕಾಣಕೋಣಕ್ಕೆ ಭೇಟಿ ನೀಡಿದಾಗ ಕಾಂಗ್ರೆಸ್‌ ಗ್ರೂಪ್‌ ಅಧ್ಯಕ್ಷ ಅಬೆಲ್‌ ಬೋರ್ಗೆಸ್‌, ಮಾಜಿ ಗ್ರೂಪ್‌ ಅಧ್ಯಕ್ಷ ಪ್ರಳಯ್‌ ಭಗತ್‌, ಯುವ ಕಾಂಗ್ರೆಸ್‌ ಮನೇಶ್‌ ಅಲಿಯಾಸ್‌ ಗೋಲು ನಾಯ್ಕ ಗಾಂವ್ಕರ್‌, ವೈಷ್ಣವ್‌ ಪೆಡೇ°ಕರ್‌ ಮತ್ತು ವೈಶಾಲ್‌ ಪಾಗಿ ಉಪಸ್ಥಿತರಿದ್ದರು.

ಅವರು ಗೋವಾ ಫಾರ್ವರ್ಡ್‌ ನಾಯಕ ವಿಕಾಸ್‌ ಭಗತ್‌ ಅವರನ್ನು ಭೇಟಿಯಾದರು. ಅಭ್ಯರ್ಥಿಯನ್ನು ನಿರ್ಧರಿಸದಿದ್ದರೂ ಪ್ರಚಾರ ಏಕೆ ಎಂದು ಕೇಳಿದಾಗ, ಶಾಸಕ ವೆಂಜಿ ವಿಗಾಸ್‌, ಅಭ್ಯರ್ಥಿ ಯಾರೆಂಬುದು ನಮಗೆ ಮುಖ್ಯವಲ್ಲ. ದೇಶದ ರಕ್ಷಣೆಗಾಗಿ ಬಿಜೆಪಿ ವಿರುದ್ಧ ಈ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿ ದೇಶವನ್ನು ಹೇಗೆ ಹಾಳು ಮಾಡಿದೆ ಎಂಬುದು ಜನರಿಗೆ ತಿಳಿಸಬೇಕು, ಅದನೇ° ನಾವು ಮಾಡುತ್ತಿದ್ದೇವೆ ಎಂದರು.

ಈ ಕುರಿತು ಕಾಂಗ್ರೆಸ್‌ ಸಂಭಾವ್ಯ ಉಮೇದುವಾರ ಗಿರೀಶ್‌ ಚೋಡಣಕರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ಪಕ್ಷಗಳ ಸದಸ್ಯರು ಮತದಾರರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಉತ್ತರಿಸಿದರು.

Advertisement

ಕಳೆದ ಹಲವು ತಿಂಗಳಿಂದ ಜನರನ್ನು ಭೇಟಿಯಾಗುತ್ತಿದ್ದೇನೆ. ಜತೆಗೆ ವಿರಿಯೆಟೊ ಫೆರ್ನಾಂಡಿಸ್‌, ಯೂರಿ ಅಲೆಮಾವೊ ಮತ್ತು ಅಮಿತ್‌ ಪಾಟ್ಕರ್‌ ಕೂಡ ಮತದಾರರನ್ನು ಭೇಟಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next