Advertisement

Lok Sabha Elections: ಕಾಂತೇಶ್‌ಗೆ ಟಿಕೆಟ್‌ ಕೊಡಿಸಲು ಶಕ್ತಿ ಮೀರಿ ಪ್ರಯತ್ನ: ಬಿಎಸ್‌ವೈ

11:36 PM Mar 10, 2024 | Shreeram Nayak |

ಶಿವಮೊಗ್ಗ: ಈಶ್ವರಪ್ಪನವರ ಪುತ್ರ ಕಾಂತೇಶ್‌ಗೆ ಲೋಕಸಭಾ ಟಿಕೆಟ್‌ ಕೊಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಈಗಲೂ ಕಾಲ ಮಿಂಚಿಲ್ಲ. ಅವರು ನನ್ನ ಜತೆ ಬಂದರೆ ದಿಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಚುನಾವಣೆ ಸಮಿತಿ ಸಭೆ ಸೋಮವಾರ ನಡೆಯಬಹುದು. ಮಾಧ್ಯಮದ ಮೂಲಕ ಈಶ್ವರಪ್ಪ ಅವರಿಗೆ ಮನವಿ ಮಾಡುತ್ತೇನೆ – ದಯವಿಟ್ಟು ಬನ್ನಿ, ದಿಲ್ಲಿಗೆ ಹೋಗೋಣ ಎಂದರು.

ಕಾರ್ಯಕರ್ತರ ಒತ್ತಡ
ಕಾಂತೇಶ್‌ಗೆ ಟಿಕೆಟ್‌ ನೀಡುವಂತೆ ಅಭಿಮಾನಿಗಳು ರವಿವಾರವೂ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ, ಈಶ್ವರಪ್ಪಗೆ ದಿಲ್ಲಿಗೆ ಬಂದರೆ ಅಮಿತ್‌ ಶಾ ಜತೆ ಚರ್ಚಿಸಬಹುದು. ಅವರ ಜತೆ ನಾನು ಕೂಡ ಇರುತ್ತೇನೆ. ಪ್ರಹ್ಲಾದ್‌ ಜೋಷಿ ಅವರನ್ನು ನಾನೇ ಈಶ್ವರಪ್ಪನವರ ಮನೆಗೆ ಕಳಿಸಿದ್ದೆ. ಈಶ್ವರಪ್ಪ ಬೇರೆ ಅಲ್ಲ, ನಾನು ಬೇರೆ ಅಲ್ಲ. ಯಾಕೆ ಚಿಂತೆ ಮಾಡುತ್ತೀರಿ ಎಂದರು.

ನನ್ನ ಮಗನಿಗೆ ಚಿತ್ರದುರ್ಗ ಟಿಕೆಟ್‌
ಕೊಡಿಸಲು ಬಿಎಸ್‌ವೈ ಭೇಟಿ: ಚಂದ್ರಪ್ಪ
ಶಿವಮೊಗ್ಗ: ನನ್ನ ಮಗನಿಗೆ ಕಳೆದ ಬಾರಿ ಟಿಕೆಟ್‌ ಕೇಳಿದ್ದೆ. ಮುಂದೆ ನೋಡೋಣ ಎಂದಿದ್ದರು. ಹಾಗಾಗಿ ಈ ಸಲ ಅವಕಾಶ ಇದ್ದರೆ ಟಿಕೆಟ್‌ ಕೊಡಿಸಿ ಅಂತ ಮನವಿ ಮಾಡಿದ್ದೇನೆ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ತಿಳಿಸಿದರು.

ಬಿಎಸ್‌ವೈ ನಿವಾಸದ ಬಳಿ ಮಾತನಾಡಿದ ಅವರು, ಬಿಎಸ್‌ವೈ ಕುಟುಂಬದ ಜತೆ ನಮ್ಮ ಸಂಪರ್ಕ ನಿರಂತರವಾಗಿದೆ. ನಾನು ಬಿಎಸ್‌ವೈ ಮೇಲೆ ವಿಶ್ವಾಸ ಇಟ್ಟಿ ದ್ದೇನೆ. ಟಿಕೆಟ್‌ ಮೇಲೆ ವಿಶ್ವಾಸ ಇಟ್ಟಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next