Advertisement

Lok Sabha Elections; ಮುನಿಸು ಪ್ರಕಟಿಸಿದ ಬಿಎಸ್‌ವೈ?

12:27 AM Jun 23, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ “ಟಿಕೆಟ್‌ ನೀಡುವಾಗಿನ ವ್ಯತ್ಯಾಸ’ವೇ ಕಾರಣ ಎಂದು ಹೇಳುವ ಮೂಲಕ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮುನಿಸನ್ನು ಮತ್ತೂಮ್ಮೆ ಹೊರಹಾಕಿದ್ದಾರೆ.

Advertisement

ಎನ್‌ಡಿಎ ಸಂಸ ದರು, ಕೇಂದ್ರ ಸಚಿವರ ಅಭಿನಂದನ ಸಮಾ ರಂಭದಲ್ಲಿ ಮಾತನಾಡಿ, ಕರ್ನಾಟಕದ ನಮ್ಮ ಎನ್‌ಡಿಎ ಅಭ್ಯರ್ಥಿಗಳ ಗೆಲುವು 6 ಕೋಟಿ ಕನ್ನಡಿಗರ ಗೆಲುವು ಎಂದು ಭಾವಿಸಿದ್ದೇನೆ.

ಈ ವಿಜಯಯಾತ್ರೆಯಲ್ಲಿ ನಮ್ಮನ್ನು ಮುನ್ನಡೆಸಿದ ಪ್ರಧಾನಿ ಮೋದಿ, ಜೆ.ಪಿ. ನಡ್ಡಾ, ಅಮಿತ್‌ ಶಾ, ದೇವೇಗೌಡ ಸಹಿತ ಎಲ್ಲ ನಾಯಕರಿಗೆ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವಿಶೇಷವಾಗಿ ನಮ್ಮ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ಸಾಧ್ಯವಾಗಿದೆ. 2-3 ಸ್ಥಾನ ಗಳನ್ನು ಕೆಲವೇ ಮತಗಳ ಅಂತರದಲ್ಲಿ ಕಳೆದುಕೊಂಡೆವು. ಟಿಕೆಟ್‌ ಕೊಡುವುದರಲ್ಲಿ ವ್ಯತ್ಯಾಸ ಆಯಿತು. ಆದ್ದರಿಂದ ಸ್ಥಾನ ಕಳೆದು ಕೊಂಡೆವು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎನ್ನುವ ಮೂಲಕ ವರಿಷ್ಠರ ಆಯ್ಕೆ ವಿರುದ್ಧ ಸೂಚ್ಯವಾಗಿ ವೇದಿಕೆಯಲ್ಲೇ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next