Advertisement

ಪತ್ರಕರ್ತರ ಸಂಘ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ; ನಾನು ಒಬ್ಬ ಪತ್ರಕರ್ತ: ಡಾ. ಹೆಗ್ಗಡೆ

03:34 PM Jan 04, 2020 | keerthan |

ಬೆಳ್ತಂಗಡಿ: ಕರ್ನಾಟಕ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾರ್ಚ್ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಮ್ಮೇಳನದ ಲಾಂಛನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು

Advertisement

ಅವರು ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ‌ ಕಲಾವಿದ ದಿನೇಶ್ ಹೊಳ್ಳ ರಚಿಸಿದ ರಾಜ್ಯ ಸಮ್ಮೇಳನದ ಲಾಂಛನವನ್ನು ಅನಾವರಣಗೊಳಿಸಿದರು.

35ನೇ ಪತ್ರಕರ್ತರ ರಾಜ್ಯ ಸಮ್ಮೇಳನವು, ಫೆ.15 ಮತ್ತು 16ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

ಲಾಂಛನ ಅನಾವರಣಗೊಳಿಸಿ‌ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು, ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಹೊಣೆಗಾರಿಕೆ ಹೆಚ್ಚಿದ್ದು ಆರ್ಥಿಕ ಪೈಪೋಟಿಯ ಇಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಹೊಸ ಪರಿಷ್ಕರಣೆಗಳಾಗುತ್ತಿವೆ. ಧರ್ಮಸ್ಥಳದಿಂದ ಪ್ರಕಟವಾಗುತ್ತಿರವ ನಿರಂತರ ಹಾಗೂ ಮುಂಜುವಾಣಿ ಪತ್ರಿಕೆಯ ಒತ್ತಡ ಹಾಗೂ ಜವಾಬ್ದಾರಿ ನನಗೆ ಅಚ್ಚುಮೆಚ್ಚು, ಹಾಗಾಗಿ ನಾನು ಒಬ್ಬ ಪತ್ರಕರ್ತನೇ ಎಂದರು. ಪತ್ರಿಕೆ ಹಾಗೂ ಪತ್ರಕರ್ತನಿಂದ ಸಮಾಜದಲ್ಲಾಗುವ ಪರಿವರ್ತನೆ ಜಾಗತಿಕವಾಗಿ ವಿಶ್ಲೇಷಣೆಗೊಳಪಡುತ್ತದೆ. ಎಲೆಮರೆಯಲ್ಲಿರುವ ಮಾಧ್ಯಮ ಮಿತ್ರರಿಗೆ ಸಮಾವೇಶ ಸದ್ಬಳಸುವಂತಾಗಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಡಾ. ಹೆಗ್ಗಡೆ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ದ.ಕ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next