Advertisement

ಮಿಡತೆ ಪ್ರತ್ಯಕ್ಷ: ಅಧಿಕಾರಿಗಳಿಂದ ಪರಿಶೀಲನೆ

07:41 AM Jun 05, 2020 | Suhan S |

ಸಿರುಗುಪ್ಪ: ತಾಲೂಕಿನ ಟಿ. ರಾಂಪುರ ಗ್ರಾಮದ ಜಮೀನುಗಳಲ್ಲಿ ಮಿಡತೆಗಳು ಕಂಡುಬಂದಿದ್ದು, ಸ್ಥಳಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ಕೆ. ಮಲ್ಲಿಕಾರ್ಜುನ ಹಾಗೂ ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ| ಆನಂದ್‌ಕುಮಾರ್‌ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಹಗರಿ ಕೃಷಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ವಿಜ್ಞಾನಿ ಡಾ| ಆನಂದ್‌ಕುಮಾರ್‌ ಮಾತನಾಡಿ, ತಾಲೂಕಿನ ಟಿ.ರಾಂಪುರ ಗ್ರಾಮದ ಹಗರಿ ದಡದಲ್ಲಿರುವ ಬಳ್ಳಾರಿ ಜಾಲಿ ಬೆಳೆದಿರುವ ಪ್ರದೇಶದಲ್ಲಿ ಮಿಡತೆಗಳು ಕಂಡುಬಂದಿದ್ದು, ಇವುಗಳನ್ನು ಪರಿಶೀಲಿಸಲಾಗಿ ಈ ಮಿಡತೆಗಳು ಆಫ್ರಿಕಾದ ಮರುಭೂಮಿಯಿಂದ ಬಂದಿರುವ ಮಿಡತೆಗಳಲ್ಲ, ಸ್ಥಳಿಯ ಮಿಡತೆಗಳಾಗಿದ್ದು, ಇವುಗಳು ವಾತಾವರಣ ತಂಪಾಗಿರುವುದರಿಂದ ಸಂತಾನೋತ್ಪತ್ತಿಯಲ್ಲಿ ತೊಡಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಿಡತೆಗಳು ಹೊರಬಂದಿರುವುದರಿಂದ ಗುಂಪು ಗುಂಪಾಗಿ ಕಾಣುತ್ತಿವೆ. ಆದರೆ ಈ ಮಿಡತೆಗಳು ರೈತರು ಬೆಳೆದ ಯಾವುದೇ ಬೆಳೆಗಳನ್ನು ತಿನ್ನುವುದಿಲ್ಲ. ಕೇವಲ ಬಳ್ಳಾರಿ ಜಾಲಿ ಗಿಡದ ಎಲೆಗಳನ್ನು ತಿನ್ನುತ್ತವೆ. ರೈತರ ಬೆಳೆಗೆ ಯಾವುದೇ ರೀತಿಯಲ್ಲಿ ಹಾನಿ ಉಂಟು ಮಾಡುವುದಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ಕೆ. ಮಲ್ಲಿಕಾರ್ಜುನ, ಜಿಲ್ಲಾ ಉಪಕೃಷಿ ನಿರ್ದೇಶಕ ಸಿ.ಆರ್‌. ಚಂದ್ರಶೇಖರ್‌, ಸಹಾಯಕ ಕೃಷಿ ನಿರ್ದೇಶಕ ನಜೀರ್‌ ಅಹಮ್ಮದ್‌, ಕೃಷಿ ಅಧಿ ಕಾರಿ ಹೇಮ್ಲಾನಾಯ್ಕ, ರೈತ ಮುಖಂಡರಾದ ವಾ. ಹುಲಿಗೆಯ್ಯ, ಮಂಜುನಾಥ, ಆದಿಬಸವ, ನಾಗರಾಜ, ಬಸವರಾಜ, ರಾಮಣ್ಣ, ಯಲ್ಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next