Advertisement

Suspend: ವಕೀಲರಿಗೆ ಲಾಕಪ್‌: ಇಬ್ಬರ ಅಮಾನತು

11:33 PM Sep 09, 2023 | Team Udayavani |

ಬೆಂಗಳೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ಪೊಲೀಸರ ಜತೆಗೆ ಮಾತನಾಡುವ ಉದ್ದೇಶದಿಂದ ಠಾಣೆಗೆ ಬಂದ ವಕೀಲ ಚಂದ್ರಶೇಖರ್‌ ಅವರನ್ನು ರಾಜಾನುಕುಂಟೆ ಪೊಲೀಸರು ಲಾಕಪ್‌ನಲ್ಲಿ ಇರಿಸಿದ್ದಾರೆಂದು ಆರೋಪಿಸಲಾಗಿದೆ.

Advertisement

ಇದರ ಬೆನ್ನಲ್ಲೇ ಕಾನ್‌ಸ್ಟೆಬಲ್‌ಗ‌ಳಾದ ಕಿರಣ್‌ ಹಾಗೂ ಮೋಹನ್‌ಕುಮಾರ್‌ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‌ಪಿ ಅಮಾನತು ಮಾಡಿ ಆದೇಶಿಸಿದ್ದಾರೆ. ಯಲಹಂಕ ತಾಲೂಕಿನ ಶ್ಯಾನಬೋಗನಹಳ್ಳಿಯ ಸರಕಾರಿ ಜಮೀನು ವಿಷಯದಲ್ಲಿ ಪಂಚಾಯತ್‌ನಲ್ಲಿ ಜಗಳ ನಡೆದಿತ್ತು. ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ ಮಾಡಿರುವುದಾಗಿ ಆರೋಪಿಸಿದಾಗ ಎರಡು ಗುಂಪಿನ ನಡುವೆ ಜಗಳ ನಡೆದಿತ್ತು. ಈ ಬಗ್ಗೆ ಚಂದ್ರಶೇಖರ್‌ ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next