Advertisement

ನೀರಿಗಾಗಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

02:44 PM Jul 19, 2019 | Team Udayavani |

ತೇರದಾಳ: ಹನಗಂಡಿ ಗ್ರಾಮದ 4ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಹನಗಂಡಿ ಗ್ರಾಮ ಪಂಚಾಯತ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಗ್ರಾಮದ 4ನೇ ವಾರ್ಡ್‌ನಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕೇಬಲ್ ಕಟ್ ಮಾಡಿ ತೊಂದರೆ ಮಾಡುತ್ತಿದ್ದು, ಗ್ರಾಪಂ ಸಿಬ್ಬಂದಿ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಗಪ್ಪ ನಾರವಗೋಳ, ವಿಠuಲ ನಾರವಗೋಳ, ಭೀಮಪ್ಪ ನಾರವಗೋಳ, ಆನಂದ ಪುಟಾಣಿ, ಶಾಂತವ್ವ ಹನಮಂತ ನಾರವಗೋಳ, ದುಂಡಪ್ಪ ಗೊಂಗಡಿ, ಇಂದುಮತಿ ನಾರವಗೋಳ, ಶೈಲಾ ನಾರವಗೋಳ, ಸುನೀತಾ ನಾರಗೋಳ, ಲಕ್ಕವ್ವ ಮುಗಳಖೋಡ, ಲಕ್ಷ್ಮೀಬಾಯಿ ಗಿರಿಸಾಗರ, ಯಲ್ಲವ್ವ ಬೆಳಗಲಿ, ಸತ್ಯವ್ವ ಮಾಕಾಣಿ ಇದ್ದರು.

ಹನಗಂಡಿ ಗ್ರಾಮದ ನಾಲ್ಕನೇವಾರ್ಡ್‌ಗೆ ದಿನಂಪ್ರತಿ ನೀರಿನ ವ್ಯವಸ್ಥೆಯಿದೆ. ಬುಧವಾರ ರಾತ್ರಿ ಪೈಪ್‌ ಮತ್ತು ಕೇಬಲ್ಕಟ್ ಮಾಡಿದ್ದರಿಂದಾಗಿ ಗುರುವಾರ ನೀರಿನ ಸಮಸ್ಯೆ ಆಗಿದೆ. ಈ ತೊಂದರೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಪಿಡಿಒ ಪಿ.ಪಿ. ರಾವಳ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next