Advertisement

ನಮ್ಮನ್ನು ಊರಿಗೆ ಕಳುಹಿಸಿ ಕೊಡಿ : ಸಾಸ್ತಾನದಲ್ಲಿ ಕೂಲಿಕಾರ್ಮಿಕರ ರೋಧನೆ

09:34 AM Mar 29, 2020 | sudhir |

ಉಡುಪಿ: ದ.ಕ. ಜಿಲ್ಲೆಗಳಿಂದ 21ಕ್ಕೂ ಹೆಚ್ಚು ವಾಹನಗಳಲ್ಲಿ ಹುಟ್ಟೂರಿಗೆ ತಲುಪುವ‌ ಸಲುವಾಗಿ ನಿನ್ನೆ ರಾತ್ರಿ ಬಾಗಲಕೋಟೆ ಕಡೆ ಹೊರಟಿದ್ದ ಸುಮಾರು 700ಕ್ಕೂ ಕಾರ್ಮಿಕರನ್ನು ಶಿರೂರು ಟೋಲ್ ನ ಚೆಕ್ ಪೋಸ್ಟ್ ನಲ್ಲಿ ರಾತ್ರಿ ತಡೆಯಲಾಗಿದ್ದು ಬೆಳಗ್ಗೆ ಸಾಸ್ತಾನ ಟೋಲ್ ಗೆ ಅವರನ್ನೆಲ್ಲ ಕರೆತಂದು ವಿಳಾಸ, ವಿವರಗಳನ್ನು ಪಡೆದು ಆಯಾಯ ಠಾಣಾ ವ್ಯಾಪ್ತಿಯ ಉಪನಿರೀಕ್ಷರು, ವೃತನಿರೀಕ್ಷಕರನ್ನು ಸ್ಥಳಕ್ಕೆ ಕರೆಸಿ ಕಾರ್ಮಿಕರ ಮಾಹಿತಿ ಸಂಗ್ರಹಿಸಲಾಯಿತು.

Advertisement

ಅನಂತರ ಎಲ್ಲಾ ಕಾರ್ಮಿಕರಿಗೂ ಉಡುಪಿ ಬೀಡನಗುಡ್ಡೆ ಸಮೀಪ ಊಟೋಪಚಾರದ ವ್ಯವಸ್ಥೆ ಮಾಡಿ ಆಯಾಯ ಠಾಣಾ ವ್ಯಾಪ್ತಿಯ ಪೊಲೀಸ್ ವಾಹನದ ಬೆಂಗಾವಲು ಪಡೆಯೊಂದಿಗೆ ಸ್ಥಳಕ್ಕೆ ಕಳುಹಿಸಿಕೊಡಲಾಯಿತು.

ಈ ಸಂದರ್ಭ ನಮ್ಮನ್ನ ನಮ್ಮ ಊರಿಗೆ ಕಳುಹಿಸಿ ಕೊಡಿ, ಕೆಲಸ ಊಟ, ತಿಂಡಿ ಇಲ್ಲದೆ ಮಕ್ಕಳು, ನಾವು ಉಪವಾಸ ಬಿದ್ದಿದ್ದೇವೆ. ಇಲ್ಲಿ ಬದಕಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಕರುಣೆ ತೋರಿ ಎನ್ನುವ ರೊದನ ಮುಗಿಲುಮುಟ್ಟಿತ್ತು. ಅವರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next