Advertisement

ಲಾಕ್‌ಡೌನ್‌: ಜನರಿಗೆ ಆತಂಕ ಬೇಡ

08:59 AM May 11, 2020 | Suhan S |

‌ಕುದೂರು: ಲಾಕ್‌ಡೌನ್‌ನಿಂದಾಗಿ ಜನರು ಆತಂಕಕ್ಕೊಳಗಾಗುವುದು ಬೇಡ. ಜನರಿಗಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಗ್ರಾಪಂ ಅಧ್ಯಕ್ಷ ಕೆ.ಟಿ.ವೆಂಕಟೇಶ್‌ ಅಭಯ ನೀಡಿದರು.

Advertisement

ಭಾನುವಾರ ಗ್ರಾಮದ 7ನೇ ವಾರ್ಡ್‌ನ ಜನರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಎಲ್ಲಾ ವರ್ಗದ ಜನರಿಗೂ ಅನಾನೂಕೂಲವಾಗಿದೆ.ಸಮಾಜದ ಕಟ್ಟ ಕಡೆಯ ವರ್ಗವನ್ನು ಇಂತಹ ಸಮಯದಲ್ಲಿ ಕಾಪಾಡಿಕೊಳ್ಳುವುದು ಮಾನವೀಯತೆ ಜೊತೆಗೆ ನಮ್ಮಂಥರಾಜಕಾರಣಿಗಳ ಜವಾಬ್ದಾರಿಯಾಗಿದೆ. ನಮ್ಮ ಕಾರ್ಯಕರ್ತರು ಹಾಗೂ ಸ್ನೇಹಿತ ರೊಂದಿಗೆ 200ಕ್ಕೂ ಹೆಚ್ಚು ಜನರನ್ನು ಗುರುತಿಸಿ, ಅಂತಹವರಿಗೆ ಅಕ್ಕಿ, ಎಣ್ಣೆ, ಬೆಳೆ ಇತರೆ ಅಗತ್ಯ ವಸ್ತು ನೀಡಲಾಗುತ್ತಿದೆ. ಲಾಕ್‌ಡೌನ್‌ ಸಮಯದಲ್ಲಿ ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಗ್ರಾಪಂ ಪೌರಕಾರ್ಮಿಕರು, ಕೋವಿಡ್ ವಾರಿ ಯರ್, ಪತ್ರಕರ್ತರನ್ನು ಅಭಿನಂದನೆ ಸಲ್ಲಿಸುವ ಜವಬ್ದಾರಿಯು ನಮ್ಮದಾಗಿದೆ ಎಂದು ಹೇಳಿದರು.

ಲಕ್ಷ್ಮೀ ವೆಂಕಟೇಶ್‌ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜು, ಕನ್ನಿಕಾ, ಲೀಲಾಮೃತಶ್ರೀ, ಕುಮಾರ್‌, ನಾಗೇಶ್‌, ಸೀನಪ್ಪ, ಜಯರಾಮು, ಗೋವಿಂದರಾಜು, ರಾಜಶೇಖರ್‌ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next