Advertisement
ಹೋಗ್ಲಿ ರಿಪೇರಿ ಮಾಡೋ ಆಲ್-ಇನ್-ಒನ್ ರಂಗಣ್ಣನನ್ನ ಕರೆಸೋಣ ಎಂದು ಮೊಬೆ„ಲ್ ಕೈಗೆತ್ತಿಕೊಂಡ್ರೆ ಅದು ಆನೇ ಆಗ್ಲಿಲ್ಲ…! ಹೆಂಗೋ ಪತಿದೇವರ ಫೋನ್ ತಗೋಂಡು ರಂಗಣ್ಣನಿಗೆ ಕಾಲ್ ಮಾಡಿದರೆ ಆಯಪ್ಪ ರಿಪೇರಿಗೆ ಬರೋದಿಲ್ಲ ಅನ್ನೋದೇ..!!
Related Articles
Advertisement
ಇತ್ತ 70 ಸಾವಿರಕ್ಕೂ ಅನೇಕ ರೆಫ್ರಿಜರೇಟರ್ಗಳು ಕೆಟ್ಟು ಹೋಗಿವೆ. ಅತ್ತ ಹಣ್ಣು, ತರಕಾರಿ ಪ್ರತಿ ದಿನ ಸಿಗುತ್ತಿಲ್ಲ. ಹೀಗಾಗಿ ಅಗತ್ಯ ಆಹಾರ ಸಾಮಗ್ರಿ ಮತ್ತು ಔಷಧಗಳನ್ನು ಸಂಗ್ರಹಿಸಿಡುವುದೇ ನಾಗರಿಕರಿಗೆ ದೊಡ್ಡ ಸವಾಲಾಗಿದೆ’ ಎಂದು ಸಿಇಎಎಂಎ ಅಧ್ಯಕ್ಷ ಕಮಲ್ ನಂದಿ ಹೇಳುತ್ತಾರೆ.
ಆನ್ಲೈನ್ ಸಲಹೆ: ಎಲೆಕ್ಟ್ರಾನಿಕ್ ಸಾಧನಗಳು ಕೆಟ್ಟು ಹೋಗಿರುವ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಅವುಗಳನ್ನು ಪರಿಹರಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲು ಬಹುತೇಕ ಕಂಪೆನಿಗಳು ಆನ್ಲೈನ್ ಮತ್ತು ಆನ್ ಫೋನ್ ಮೊರೆ ಹೋಗಿವೆ.
ಜತೆಗೆ ಗ್ರಾಹಕರ ಅನುಕೂಲಕ್ಕಾಗಿ ‘ನೀವೇ ಸ್ವತಃ ರಿಪೇರಿ ಮಾಡಿಕೊಳ್ಳಿ’ (ಡೂ ಇಟ್ ಯುವರ್ ಸೆಲ್ಫ್ ) ವಿಡಿಯೋಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿವೆ.
ದೇಶದ ಮೂರು ಪ್ರಮುಖ ಸ್ಮಾರ್ಟ್ಫೋನ್ ಕಂಪೆನಿಗಳಿಗೆ ಪ್ರತಿ ನಿತ್ಯ ಸರ್ವಿಸ್ಗೆ ಸಂಬಂಧಿಸಿದ 11,000 ದೂರುಗಳು ಬರುತ್ತಿವೆ. ಹೀಗಾಗಿ ಎಲೆಕ್ಟ್ರಾನಿಕ್ ಸಾಧನಗಳ ರಿಪೇರಿಯನ್ನೂ ಅಗತ್ಯ ಸೇವೆ ಎಂದು ಪರಿಗಣಿಸಿ ಸರಕಾರ ಅವಕಾಶ ಮಾಡಿಕೊಟ್ಟರೆ ಗ್ರಾಹರಿಗೆ ಸೇವೆ ಒದಗಿಸುವುದಾಗಿ ಸಂಘಟನೆಗಳು ತಿಳಿಸಿವೆ.