Advertisement

ಮೃಗಾಲಯಗಳಲ್ಲಿ ಲಾಕ್‌ಡೌನ್‌ ತೆರವು

03:05 PM Jun 01, 2020 | mahesh |

ಬ್ರಸೆಲ್ಸ್‌ : ಲಾಕ್‌ಡೌನ್‌ ಅನ್ನು ಎಷ್ಟು ಬೇಗ ಮತ್ತು ಯಾವ ರೀತಿ ಸಡಿಲಿಸಿ ಜನಜೀವನವನ್ನು ಸಹಜ ಸ್ಥಿತಿಗೆ ತರಬಹುದು ಎನ್ನುವುದೇ ಈಗ ಎಲ್ಲ ಸರಕಾರಗಳ ಚಿಂತೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಯುರೋಪಿನ ದೇಶಗಳಂತೂ ಲಾಕ್‌ಡೌನ್‌ ಸಡಿಲಿಕೆಗೆ ತುದಿಗಾಲಲ್ಲಿ ನಿಂತಿವೆ. ಡೆನ್ಮಾರ್ಕ್‌, ಜರ್ಮನಿ, ಫ್ರಾನ್ಸ್‌, ಇಟಲಿ, ಜೆಕ್‌ ರಿಪಬ್ಲಿಕ್‌, ಸ್ಪೈನ್‌ ಮತ್ತಿತರ ದೇಶಗಳು ಪ್ರವಾಸಿಗಳಿಗೆ ನಿಧಾನಕ್ಕೆ ತೆರೆದುಕೊಳ್ಳುತ್ತಿವೆ.

Advertisement

ಈ ಎಲ್ಲ ದೇಶಗಳಲ್ಲಿರುವ ಒಂದು ಸಮಾನ ಅಂಶವೆಂದರೆ ಎಲ್ಲೆಡೆ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಮೃಗಾಲಯಗಳು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರಗಳು ಎನ್ನುವುದು ಒಂದು ಕಾರಣವಾದರೆ ಪ್ರವಾಸಿಗರಿಲ್ಲದೆ ಈ ಮೃಗಾಲಯಗಳನ್ನು ನಿರ್ವಹಿಸುವುದು ಸರಕಾರಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಮೃಗಾಲಯಗಳನ್ನು ಮೊದಲ ಆದ್ಯತೆಯಲ್ಲಿ ಪ್ರಾರಂಭಿಸಲಾಗಿದೆ.

ಉಳಿದ ಪ್ರವಾಸಿ ತಾಣಗಳನ್ನು ಮುಚ್ಚಿದಾಗ ಹೆಚ್ಚೆಂದರೆ ಸಿಬಂದಿಗಳ ವೇತನ, ವಿದ್ಯುತ್‌ ಬಿಲ್‌…ಈ ರೀತಿಯ ಖರ್ಚುಗಳ ಹೊರೆ ಮಾತ್ರ ಇತ್ತು. ಆದರೆ ಮೃಗಾಲಯಗಳಲ್ಲಿರುವ ಅಷ್ಟೂ ಮೃಗಗಳ ಹೊಟ್ಟೆತುಂಬಿಸಬೇಕು, ಅವುಗಳ ವೈದ್ಯಕೀಯ ಶುಶ್ರೂಷೆ, ಇನ್ನುಳಿದ ನಿರ್ವಹಣೆಗಳೆಲ್ಲ ಭಾರೀ ಖರ್ಚಿನ ಬಾಬತ್ತುಗಳು. ಇದನ್ನು ಭರಿಸಲಾಗದೆ ಸರಕಾರಗಳು ಕಂಗಾಲಾಗಿದ್ದವು. ಹೀಗಾಗಿ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಬೆಲ್ಜಿಯಂನ ಪಾರ್ಕ್‌ ಪೈರಿ ಡಯಾಜ ಈ ಪೈಕಿ ಒಂದು ಮೃಗಾಲಯ. ಬೆಳಗ್ಗೆ ಆನೆಗಳೆಲ್ಲ ಸಾಲಾಗಿ ನಿಂತು ಒಂದು ಸುತ್ತು ವಾಕಿಂಗ್‌ ಮಾಡುವುದು ಬಳಿಕ ಮಾವುತರ ಆದೇಶದಂತೆ ಕಾಡಿನೊಳಗೆ ಹೋಗುವುದು ಇಲ್ಲಿ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಇದನ್ನು ನೋಡಲೆಂದೇ ಪ್ರವಾಸಿಗರು ಬೆಳಗ್ಗಿನ ಹೊತ್ತು ಧಾವಿಸುತ್ತಿದ್ದರು. ಮಾ.13ರಂದು ಲಾಕ್‌ಡೌನ್‌ ಜಾರಿಯಾದ ಬಳಿಕವೂ ಜನರಿಲ್ಲದೆಯೇ ಈ ಪರಂಪರೆಯನ್ನು ಪಾಲಿಸಲಾಗಿತ್ತು. ಆದರೆ ಪ್ರಮುಖ ಆದಾಯ ಮೂಲವಿಲ್ಲದೆ ಪ್ರಾಣಿಗಳು ಹೊಟ್ಟೆಗೆ ಸಾಕಷ್ಟು ಆಹಾರ ಒದಗಿಸುವುದು ಕಷ್ಟವಾಗಿತ್ತು.

ಮಾಮೂಲಿಯಾಗಿ ದಿನಕ್ಕೆ 30,000 ಪ್ರವಾಸಿಗರ ಸಾಮರ್ಥ್ಯವಿದೆ ಈ ಮೃಗಾಲಯಕ್ಕೆ. ಆದರೆ ಈಗ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ 5,000 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಏಕಮುಖ ಪಾದಚಾರಿ ದಾರಿಗಳಲ್ಲೇ ಓಡಾಡಬೇಕು.

ಪ್ರವಾಸಿಗರಿಲ್ಲದಿದ್ದರೆ ಮೃಗಾಲಯಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಪ್ರಾಣಿಗಳಿಗೆ ಅರೆ ಹೊಟ್ಟೆ ಉಂಡು ಅಭ್ಯಾಸವಿರುವುದಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಅವುಗಳ ಪಾಲನೆ ಬಹಳ ಕಷ್ಟವಾಯಿತು ಎನ್ನುತ್ತಾರೆ ಪೈರಿ ಡಯಾಜ ಮೃಗಾಲಯದ ವಕ್ತಾರ ಮ್ಯಾಥ್ಯೂ ಗಾಡ್‌ಫ್ರಾಯ್‌.

Advertisement

ಪ್ರವಾಸಿಗರಿಲ್ಲದೆ ಪ್ರಾಣಿಗಳಿಗೂ ಒಂಟಿತನ ಕಾಡಲಾರಂಭಿಸಿತ್ತು. ಕೆಲವು ಪ್ರಾಣಿಗಳ ಸ್ವಭಾವ ಬದಲಾದದ್ದನ್ನು ನಾವು ಗಮನಿಸಿದ್ದೇವೆ. ಲಾಕ್‌ಡೌನ್‌ ದಿನಗಳಲ್ಲಿ 1.10 ಲಕ್ಷ ಡಾಲರ್‌ನಷ್ಟು ವರಮಾನ ನಿತ್ಯ ನಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ ಮ್ಯಾಥ್ಯೂ ಗಾಡ್‌ಫ್ರಾಯ್‌.

Advertisement

Udayavani is now on Telegram. Click here to join our channel and stay updated with the latest news.

Next