Advertisement

ಗುಳೆ ಹೋದವರೆಲ್ಲಾ ಬೈಕಿನಲ್ಲೇ ತಮ್ಮ ಊರಿಗೆ ಬಂದ್ರು

09:32 AM Mar 29, 2020 | sudhir |

ರಾಯಚೂರು: ರಾಜಧಾನಿಗೆ ನಾನ ಕೆಲಸವರಸಿ ಗುಳೆ ಹೋಗಿದ್ದ ಈ ಭಾಗದ ಜನ ತಮ್ಮೂರಿನತ್ತ ಮುಖ ಮಾಡಿದ್ದು, ಶುಕ್ರವಾರ 8-10 ಜನ ಬೈಕ್ ಗಳಲ್ಲೇ ಆಗಮಿಸಿದ್ದು ಕಂಡು ಬಂತು.

Advertisement

ಯಾದಗಿರಿ ಜಿಲ್ಲೆಯ ಸೈದಾಪುರ ಮೂಲದ ಯುವಕರು ಕಳೆದ ಏಳೆಂಟು ವರ್ಷದಿಂದ ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದರು. ಗಾರೆ ಕೆಲಸ, ಕಟ್ಟಡ ನಿರ್ಮಾಣ ಸೇರಿ ನಾನಾ ಕೆಲಸಗಳಲ್ಲಿ ತೊಡಗಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಒಂದೆಡೆ ಕೆಲಸ ಸಿಗದಾಗಿದ್ದರೆ ಮತ್ತೊಂದೆಡೆ ಕಾಯಿಲೆ ಭೀತಿ ಕಾಡುತ್ತಿದೆ. ಅಲ್ಲದೇ ಊಟಕ್ಕೂ ಸಮಸ್ಯೆ ಎದುರಾದ ಕಾರಣ ಎಲ್ಲರೂ ತಮ್ಮೂರಿಗೆ ಆಗಮಿಸುತ್ತಿದ್ದಾರೆ. ಶುಕ್ರವಾರ ಬೆಂಗಳೂರು ಬಿಟ್ಟಿದ್ದು ಶನಿವಾರ ಮಧ್ಯಾಹ್ನ ಸಮೀಪದ ಸಾಥಮೈಲ್ ಬಳಿ ಆಗಮಿಸಿದ್ದರು. ಅವರನ್ನು ತಡೆದು ತಪಾಸಣೆ ಮಾಡಿದ ಪೊಲೀಸರು. ನಿಮ್ಮ ನಿಮ್ಮಲ್ಲಿ ಅಂತ ಕಾಯ್ದುಕೊಳ್ಳಬೇಕು. ಊರಿಗೆ ಹೋದ ಬಳಿಕ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿ ಹೇಳಿ ಕಳುಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next