Advertisement

ಸಮುದ್ರ ತೆರೆಗಳಿಂದ ಇಬ್ಬರನ್ನು ರಕ್ಷಿಸಿದ ಸ್ಥಳೀಯರು

10:47 PM May 17, 2019 | Sriram |

ತೆಕ್ಕಟ್ಟೆ: ಇಲ್ಲಿನ ಕೊಮೆ ಕಡಲ ತೀರದಲ್ಲಿ ಮೋಜಿಗಾಗಿ ಸಮುದ್ರದಲ್ಲಿ ಆಟವಾಡಲು ಹೋದ ಬೆಂಗಳೂರಿನಿಂದ ಬಂದ ಮೂವರನ್ನು ಸಮುದ್ರ ಸೆಳೆದುಕೊಂಡಿದೆ. ಈ ವೇಳೆ ಇಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.

Advertisement

ಬೆಂಗಳೂರಿನ ಸಿಂಗಲ್‌ ಚಿಪ್‌ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 15 ಮಂದಿ ಸಾಫ್ಟ್‌ವೇರ್‌ ಇಂಜಿನಿಯರ್ ಸ್ನೇಹಿತನ ಮದುವೆ ಸಮಾರಂಭ ಮುಗಿಸಿ, ಕೊಮೆಯ ಬೀಚ್‌ ವೇವ್ಸ್‌ ರೆಸಾರ್ಟ್‌ನಲ್ಲಿ ತಂಗಲು ಬಂದು ತಂಡ ಸಮುದ್ರಕ್ಕೆ ಇಳಿದ್ದು ಆಟವಾಡುತ್ತಿದ್ದರು ಈ ಸಂದರ್ಭದಲ್ಲಿ ಸ್ಥಳೀಯರು ಎಚ್ಚರಿಸಿದರೂ ಕೂಡಾ ಲೆಕ್ಕಿಸದೆ ಮೋಜು ಮಾಡುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರ ಸ್ಪಂದನೆ
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಅಲೆಯ ಅಬ್ಬರದ ನಡುವೆಯೂ ಪ್ರಾಣದ ಹಂಗು ತೊರೆದು ರಕ್ಷಣೆಗೆ ಮುಂದಾದರು. ಸುಜಿತ್‌(26) ಅಲೆಗಳ ಮಧ್ಯದಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರಾದ ಮಹಾಬಲ ಬಂಗೇರ, ಗಣೇಶ್‌ ಪೂಜಾರಿ, ಸಂತೋಷ್‌, ನಾಗರಾಜ್‌ ಸಂದೀಪ್‌, ವಿಜಯ, ಸಂಪತ್‌ ಹಾಗೂ ಉಮೇಶ್‌ ಅವರು ಥರ್ಮಾಕೂಲ್‌ ಹಾಗೂ ಹಗ್ಗಗಳ ಸಹಾಯದಿಂದ ತೀರಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿದರಾದರೂ ಕೂಡಾ ಅಷ್ಟರಲ್ಲಿಯೇ ಸ್ಥಿತಿ ಗಂಭೀರವಾಗಿತ್ತು. ಈ ಸಂದರ್ಭದಲ್ಲಿ ಪರಿಸರದ ನೂರಾರು ಮಂದಿ ಕಡಲ ತೀರದಲ್ಲಿ ನೆರೆದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next