Advertisement

ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ

11:44 AM Oct 22, 2021 | Team Udayavani |

ವಿಟ್ಲ, ಅ.22 : ಅಳಿಕೆ ಗ್ರಾಮ ಕಲ್ಲೆಂಚಿಪಾದೆ ಎಂಬಲ್ಲಿ ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆಗೆ ಭಾರೀ ಹಾನಿಯಾದ ಘಟನೆ ಸಂಭವಿಸಿದೆ.

Advertisement

ಅಳಿಕೆ ಗ್ರಾಮ ಕಲ್ಲೆಂಚಿಪಾದೆ ಶೀನ ನಲಿಕೆ ಅವರ ಮನೆಗೆ ರಾತ್ರಿ ಭಾರೀ ಸಿಡಿಲು ಬಡಿದಿದೆ. ಇದರಿಂದ ಶೀನ ನಲಿಕೆ, ಅವರ ಪತ್ನಿ ಸುಶೀಲಾ, ಮಕ್ಕಳಾದ ವಿದ್ಯಾ ಮತ್ತು ವಿನಯ ಅವರು ಗಾಯಗೊಂಡಿದ್ದಾರೆ. ಮನೆಯ ಗೋಡೆಯನ್ನು ಸೀಳಿಕೊಂಡು ಸಿಡಿಲು ಪ್ರವೇಶಿಸಿದ್ದರಿಂದ ಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ವಿದ್ಯುತ್ ವಯರಿಂಗ್, ವಿವಿಧ ಉಪಕರಣಗಳು ಸುಟ್ಟುಹೋಗಿದೆ.

ಇದನ್ನೂ ಓದಿ:- ನಿಯಂತ್ರಣಕ್ಕೆ ಬಾರದ ಡೆಂಘೀ-ಮಲೇರಿಯಾ

ಇದರಿಂದ ಎರಡು ಲಕ್ಷ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ವಿಟ್ಲದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಮಾಜಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷ ಚಂದ್ರಶೇಖರ ಯು. ಭೇಟಿ‌ ನೀಡಿದ್ದಾರೆ. ಗ್ರಾಮಕರಣಿಕ ಸತೀಶ್ ಸುವರ್ಣ ಹಾಗೂ ಸಹಾಯಕ ಜಗನ್ನಾಥ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next