Advertisement

ಸೋಲಿನ ಸೇಡಿಗೆ ಚೂರಿ ಇರಿತ; ಕೈ ಮೆರವಣಿಗೆ ಮೇಲೆ ರಾಸಾಯನಿಕ ದಾಳಿ 

02:13 PM Sep 03, 2018 | Team Udayavani |

ತುಮಕೂರು / ಕೊಪ್ಪಳ:ಸ್ಥಳೀಯ ಸಂಸ್ಥೆ ಚುನಾವಣಾ ಫ‌ಲಿತಾಂಶ ಸೋಮವಾರ ಪ್ರಕಟವಾಗಿದ್ದು ಕೆಲವೆಡೆ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

ತುಮಕೂರಿನಲ್ಲಿ ರಾಸಾಯನಿಕ ದಾಳಿ 
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ 16 ನೇ ವರ್ಡ್‌ನ ಬಾರ್‌ಲೈನ್‌ನಲ್ಲಿ  ಕಾಂಗ್ರೆಸ್‌ ವಿಜೇತ ಅಭ್ಯರ್ಥಿ ವಿಜಯೋತ್ಸವ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ಆ್ಯಸಿಡ್‌ ಮಾದರಿಯ ರಾಸಾಯನಿಕ ದಾಳಿ ನಡೆಸಿದ್ದಾರೆ. 

10 ಮಂದಿ ಗಾಯಗೊಂಡಿದ್ದು ಅವರನ್ನು ಕೋತಿ ತೋಪಿನ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ಕೊಡಲಾಗಿದೆ. 

ತುಮಕೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳದಲ್ಲಿ ಸೋಲಿನ ಸೇಡಿಗೆ ಇರಿತ 
ಕೊಪ್ಪಳ: ನಗರಸಭೆಯ 19 ನೇ ವಾರ್ಡ್‌ನಲ್ಲಿ  ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಯ ಸಂಬಂಧಿಕನೊಬ್ಬ ಜಯ ಸಾಧಿಸಿದ ಜೆಡಿಎಸ್‌ ಅಭ್ಯರ್ಥಿಯ ತಾಯಿಗೆ ಚೂರಿ ಯಿಂದ ಇರಿದ ಘಟನೆ ನಡೆದಿದೆ. 

Advertisement

ಸಯ್ಯದ್‌ ನಿಜಾಮುದ್ದೀನ್‌ ಹುಸೇನಿ ಎಂಬಾತ ಅತ್ತಿಗೆ ಸೋತ ಸೇಡಿನಲ್ಲಿ  ಜೆಡಿಎಸ್‌ ಅಭ್ಯರ್ಥಿಯ ಮನೆಗೆ ನುಗ್ಗಿ ಯಾರೂ ಸಿಗದಿದ್ದಾಗ ತಾಯಿಗೆ ಇರಿದು ಪರಾರಿಯಾಗಿದ್ದಾನೆ. 

ರೆಹಮತ್‌ ಬಿ ಎನ್ನುವವರು ಇರಿತಕ್ಕೊಳಗಾದ ಮಹಿಳೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯಕ್ಕೆ ಸಹಕರಿಸಿದ ಆರೋಪಿ ಹಾಜಿ ಹುಸೇನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು , ಸಯ್ಯದ್‌ ನಿಜಾಮುದ್ದೀನ್‌ಗಾಗಿ ಶೋಧ ನಡೆಸುತ್ತಿದ್ದಾರೆ. 

ಕೊಪ್ಪಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next