Advertisement

ಇಂದೇ ಸಾಲ ಮನ್ನಾ ಮಾಡಿ,ಇಲ್ದಿದ್ರೆ: ಎಚ್‌ಡಿಕೆಗೆ ಬಿಎಸ್‌ವೈ ನೇರ ಸವಾಲು

11:43 AM May 25, 2018 | |

 ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ .ಕುಮಾರಸ್ವಾಮಿ ಅವರು ಚುನವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲ ಮನ್ನಾ ಘೋಷಣೆಯನ್ನು ಇಂದೇ ಮಾಡಬೇಕು. ಇಲ್ಲವಾದಲ್ಲಿ  ಹೋರಾಟದ ರೂಪು ರೇಷೆಯನ್ನು ಸಿದ್ಧ ಪಡಿಸಬೇಕಾಗುತ್ತದೆ’ ಎಂದು ವಿಧಾನಸಭೆಯ ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಗುರುವಾರ ಗುಡುಗಿದ್ದಾರೆ. 

Advertisement

ವಿಶ್ವಾಸ ಮತ ಸಾಬೀತು ಪಡಿಸುವ ಮಹತ್ವದ ದಿನ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ‘ಚುನಾವಣಾ ಪೂರ್ವ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿ ಮಾಡಿ , ಸಮ್ಮಿಶ್ರ ಸರ್ಕಾರ ಎಂದು ನೆಪ ಹೇಳಿ ತಪ್ಪಿಸಿಕೊಳ್ಳಬೇಡಿ’ ಎಂದು ಸವಾಲು ಹಾಕಿದರು. 

‘ನನ್ನ ಜೊತೆ ಇರುವ 103 ಶಾಸಕರು ಸಿಂಹದ ಮರಿಗಳು. ಪ್ರತಿಪಕ್ಷದಲ್ಲಿ ಕುಳಿತು ಘರ್ಜಿಸಲು ಸಿದ್ದವಾಗಿದ್ದಾರೆ’ ಎಂದರು. 

‘ಸ್ವತಃ ರೇವಣ್ಣ ಅವರ ಮಗ ಹೇಳಿದ್ದಾನೆ, ನಾನಲ್ಲ, ಸೂಟ್‌ಕೇಸ್‌ ಕೊಟ್ಟರೆ ಮಾತ್ರ ಕೆಲಸ ನಡೆಯುತ್ತದೆ ಎಂದು . ಅಧಿಕಾರದಲ್ಲಿ ಇಲ್ಲದ ಕಾಲದಲ್ಲಿ ಯಾವ ರೀತಿ ಲೂಟಿ, ಭ್ರಷ್ಟಾಚಾರ ಮಾಡಿದ್ದಾರೋ, ಅದೆಲ್ಲಾ ಈಗ ಮುಂದು ವರಿಸುವುದು ಶತ ಸಿದ್ಧ’ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next