Advertisement

ಸುರಕ್ಷಿತ ಎಂದೆನಿಸಿದ ದೇಶಕ್ಕೆ ತೆರಳಿ

07:25 AM Aug 14, 2017 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರು ಅಭದ್ರತೆ ಎದುರಿಸುತ್ತಿದ್ದಾರೆ ಎಂಬ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರ ಹೇಳಿಕೆಗೆ ಆರೆಸ್ಸೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅನ್ಸಾರಿ ಹೇಳಿಕೆಗೆ ಪ್ರತಿಕ್ರಿಯಿಸಿ ರವಿವಾರ ಮಾತನಾಡಿರುವ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್‌, “ಅನ್ಸಾರಿಯ ವರಿಗೆ ನನ್ನದೊಂದು ಕೋರಿಕೆ ಯಿದೆ.  ಅವರು ಹಾಗೂ ಭಾರತದಲ್ಲಿ ಅಭದ್ರತೆ ಇದೆ ಎಂದು ಭಾವಿಸುವ ಇತರರು 

Advertisement

ಮೊದಲು ಮುಸ್ಲಿಮರು ಎಲ್ಲಿ ಸುರಕ್ಷಿತವಾಗಿದ್ದಾರೆ ಎಂಬುದನ್ನು ತಿಳಿಸಲಿ ಮತ್ತು ಆ ದೇಶಕ್ಕೆ ಹೋಗಿ ನೆಲೆಸಲಿ’ ಎಂದಿದ್ದಾರೆ.
ನಾಗ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್‌, “ಅನ್ಸಾರಿ ಅವರ ಹೇಳಿಕೆಯನ್ನು ಅವರ ಸಮುದಾಯದವರೇ ಸ್ವೀಕರಿಸುತ್ತಿಲ್ಲ. ಹೀಗಾಗಿ, ಅನ್ಸಾರಿ ಅವರೆಂಥ ದೌರ್ಭಾಗ್ಯಶಾಲಿಗಳು ಎಂಬುದು ಗೊತ್ತಾಗುತ್ತಿದೆ. ಅವರ ಹೇಳಿಕೆಗೆ ಬಹುತೇಕ ಮುಸ್ಲಿಮರೇ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next