Advertisement

ಲಿಂಗಾಯತ ಪ್ರತ್ಯೇಕ ಧರ್ಮ ಜನರ ಆಸೆ: ಮಾತೆ ಮಹಾದೇವಿ

06:45 AM Sep 07, 2017 | Team Udayavani |

ಕಲಬುರಗಿ: ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆನ್ನುವುದು ಜನ ಸಾಮಾನ್ಯರ ಆಸೆಯೇ ಹೊರತು
ಬಸವಣ್ಣನವರ ಅನುಯಾಯಿಗಳ ಕುತಂತ್ರವಲ್ಲ, ಗುರು ಪರಂಪರೆ ಯವರಂತೆ ನಮಗೆ ಪೀಠಗಳ ವ್ಯಾಮೋಹವೂ ಇಲ್ಲ ಎಂದು ಬಸವ ಧರ್ಮ ಪೀಠದ ಜಗದ್ಗುರು ಡಾ| ಮಾತೆ ಮಹಾದೇವಿ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡು
ವಂತೆ ಆಗ್ರಹಿಸಿ ನಗರದ ಎನ್‌.ವಿ. ಮೈದಾನದಲ್ಲಿ ಸೆ.24ರಂದು ಬೃಹತ್‌ ರ್ಯಾಲಿ ಆಯೋಜಿಸಲಾಗಿದೆ. ಸಮ
ಯದ ಅಭಾವದಿಂದ ಕಾರ್ಯಕ್ರಮ ಸೆ.4ರ ಬದಲು 24ಕ್ಕೆ ಮುಂದೂಡಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ತಮ್ಮ ಬೇಡಿಕೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next