Advertisement

Lingayat ; ಸಿದ್ದರಾಮಯ್ಯನವರಿಂದ ಗೆದ್ದಿದ್ದೀರಿ..:ಶಾಮನೂರು ವಿರುದ್ಧ ಎಚ್.ವಿಶ್ವನಾಥ್ ಕಿಡಿ

07:11 PM Oct 01, 2023 | Team Udayavani |

ಬೆಳಗಾವಿ: ಸರ್ಕಾರದಲ್ಲಿ ಲಿಂಗಾಯತ ನಾಯಕರ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಮಾಜಿ ಸಚಿವ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದು, ಜಾತಿಯ ಪಕ್ಷದ ಪ್ರತಿನಿಧಿ ಎಂದು ಮಾತಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

Advertisement

ನಿಮಗೆ ಕಾಂಗ್ರೆಸ್ ನಲ್ಲಿ ಅವಕಾಶಗಳು ಸಿಕ್ಕಿವೆ. ಏಳು ಮಂದಿಗೆ ಮಂತ್ರಿ ಗಿರಿ ಕೊಟ್ಟಿದ್ದಾರೆ ಇನ್ನೂ ಎಷ್ಟು ಜನ ಬೇಕಿತ್ತು? ಜಾತಿಯ ಮೇಲೆ ಯಾರನ್ನೂ ಪೋಸ್ಟಿಂಗ್ಸ್ ಕೊಡಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲೆಲ್ಲಿ ಅವಕಾಶ ಮಾಡಿಕೊಡಬೇಕು ಮಾಡಿಕೊಟ್ಟಿದ್ದಾರೆ. ನಿಮಗೆ ಸಿಎಂ ಸ್ಥಾನ ಬೇಕಿತ್ತು ಅಂದರೆ ನಾಯಕತ್ವ ತಗೊಳ್ಳಿ. ನಿಮ್ಮ ಜನಾಂಗದವರ ಕೈಯಲ್ಲಿ ಹೆಚ್ಚು ವೋಟ್ ಹಾಕಿಸಿಕೊಳ್ಳಿ.ಗೆದ್ದು ಬಂದು ಮುಖ್ಯಮಂತ್ರಿ ಅಗಿ, ಅದರಲ್ಲಿ ನಿಮ್ಮ ಆಸಕ್ತಿ ತೋರಿಸಿ ಎಂದು ಸವಾಲೆಸೆದಿದ್ದಾರೆ.

ಎಷ್ಟು ವೋಟ್ ಹಾಕಿಸಿದ್ದೀರಿ ನೀವು. ಇಲ್ಲಿ ಸಿದ್ದರಾಮಯ್ಯನವರಿಂದ ಎಷ್ಟು ವೋಟ್ ಬಿದ್ದಿದೆ. ನೀವೆಲ್ಲಾ ಸಿದ್ದರಾಮಯ್ಯನವರಿಂದ ಗೆದ್ದಿದೀರಿ. ನಾನು ಬಹಳ ಖಾರವಾಗಿ ಹೇಳಬೇಕಾಗುತ್ತದೆ. ಅನಾವಶ್ಯಕವಾಗಿ ಮಾತಾಡಬೇಡಿ. ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಹಾಕಿ ಹೆಚ್ಚು ಜನ ಗೆದ್ದಿದ್ದಾರೆ.ನಮ್ಮ ರಾಜ್ಯದಲ್ಲಿ ಇರುವ ಲಿಂಗಾಯತ ಸೇರಿದಂತೆ ಎಲ್ಲ ಧರ್ಮದವರು ಆಶೀರ್ವಾದ ಮಾಡಿದ್ದೀರಾ?ಹೆಚ್ಚಾಗಿ ಕುರುಬ ಸಮುದಾಯದ್ದೂ ಆಗಿದೆ.ಜಾತಿ ಆಧಾರದ ಮೇಲೆ ಅಧಿಕಾರಿ ಆಯ್ಕೆ ಆಗುತ್ತಿದ್ದರೆ ಸರಿ ಮಾಡಲು ಹೇಳಿ‌.ಸಿದ್ದರಾಮಯ್ಯನವರಿಗೆ ಬಹಳ ಹತ್ತಿರ ಇದ್ದವರು ನೀವು.ಅದನ್ಯಾಕೆ ಬೀದಿಯಲ್ಲಿ ಬಂದು ದೊಡ್ಡ ರಂಪಾಟ ಮಾಡ್ತಿದ್ದೀರಿ. ಅಧಿಕಾರ ಶಾಹಿ ಆಡಳಿತವನ್ನ ಬೀದಿಗೆ ತಂದು ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಜಾತಿ ವಿಷಯ ಮಾತಾಡಿದರೆ ಆಡಳಿತ ಕುಸಿಯುತ್ತದೆ. ನಿಮಗ್ಯಾರಿಗೂ ಜವಾಬ್ದಾರಿ ಇಲ್ಲವೇ ? ಸಣ್ಣ ಪುಟ್ಟ ಜಾತಿಗಳ ಭವಿಷ್ಯ ಇದೆ, ಅದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ ಆಗ ಜನಕ್ಕೆ ಅರ್ಥ ಆಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next