Advertisement

ತರಕಾರಿ ಸಗಟು ಮಾರಾಟಕ್ಕೆ ಸ್ಥಳ ಪರಿಶೀಲನೆ

04:59 PM Apr 23, 2020 | Naveen |

ಲಿಂಗಸುಗೂರು: ವಿವಿಧ ತರಕಾರಿಗಳ ಸಗಟು(ಹೋಲಸೇಲ್‌) ಮಾರಾಟಕ್ಕೆ ಪಟ್ಟಣದ ಎಪಿಎಂಸಿಯಲ್ಲಿ ವ್ಯವಸ್ಥೆ ಮಾಡಲು ಬುಧವಾರ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಸ್ಥಳ ಪರಿಶೀಲಿಸಿದರು.

Advertisement

ಕೊರೊನಾ ಭೀತಿ ಹಿನ್ನೆಲೆಯಲ್ಲಿ ತರಕಾರಿಗಳ ಸಗಟು ಮತ್ತು ಚಿಲ್ಲರೆ ಮಾರಾಟಕ್ಕಾಗಿ ಸದ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎರಡು ವ್ಯಾಪಾರಗಳು ಒಂದೇ ಕಡೆ ನಡೆಯುತ್ತಿರುವುದರಿಂದ ಜನ ಸಂದಣಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ತರಕಾರಿ ಸಗಟು ಮಾರಾಟಕ್ಕಾಗಿ ನಾಳೆಯಿಂದ ಎಪಿಎಂಸಿ ಹೊಸ ಪ್ಲಾಟ್‌ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಗಟು ವ್ಯಾಪಾರ ಮಾಡುವವರು ಬೆಳಗಿನ ಜಾವ 2:30ಗೆ ವಹಿವಾಟು ಮಾಡುವುದನ್ನು ಬಿಟ್ಟು ಬೆಳಗ್ಗೆ 5:00ಕ್ಕೆ ವಹಿವಾಟು ನಡಸಬೇಕು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಗಟು ವ್ಯಾಪಾರಸ್ಥ ಅಬ್ದುಲ್‌ ರೌಫ್‌ರಿಗೆ ಸೂಚಿಸಿದರು. ಡಿವೈಎಸ್‌ಪಿ ಎಸ್‌.ಎಸ್‌. ಹುಲ್ಲೂರು, ತಹಶೀಲ್ದಾರ್‌ ಚಾಮರಾಜ ಪಾಟೀಲ, ಸಿಪಿಐ ಯಶವಂತ ಬಿಸನಳ್ಳಿ, ಮುಖ್ಯಾಧಿಕಾರಿ ಕೆ. ಮುತ್ತಪ್ಪ, ಪಿಎಸ್‌ಐ ಪ್ರಕಾಶರೆಡ್ಡಿ ಡಂಬಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next