Advertisement

Madikeri: ವಿದ್ಯುತ್‌ ಸ್ಪರ್ಶಗೊಂಡು ಲೈನ್‌ಮೆನ್‌ ಸಾವು

02:07 AM Nov 10, 2023 | Team Udayavani |

ಮಡಿಕೇರಿ: ವಿದ್ಯುತ್‌ ಲೈನ್‌ ದುರಸ್ತಿ ಪಡಿಸುತ್ತಿದ್ದ ಸಂದರ್ಭ ವಿದ್ಯುತ್‌ ಸ್ಪರ್ಶಗೊಂಡು ಲೈನ್‌ಮನ್‌ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಆರ್ಜಿ ಗ್ರಾಮದಲ್ಲಿ ನಡೆದಿದೆ.

Advertisement

ಅನಿಲ್‌ ಮ್ಯಾನೇಜಸ್‌(45) ಅವರು ಮೃತರು. ಕಳೆದ 20 ವರ್ಷಗಳಿಂದ ಅನಿಲ್‌ ಅವರು ವಿರಾಜಪೇಟೆ ವಲಯದಲ್ಲಿ ಲೈನ್‌ಮನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹೆಗ್ಗಳ ವಿಭಾಗಕ್ಕೆ ಒಳಪಡುವ ಆರ್ಜಿ ಗ್ರಾಮದಲ್ಲಿ 11 ಕೆ.ವಿ. ವಿದ್ಯುತ್‌ ತಂತಿ ದುರಸ್ತಿಪಡಿಸುತ್ತಿದ್ದ ಸಂದರ್ಭ ಮತ್ತೂಂದು ಭಾಗದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯಿಂದ ಭೂಮಿಗೆ ವಿದ್ಯುತ್‌ ಪ್ರವಹಿಸಿ ಅನಿಲ್‌ ಮ್ಯಾನೇಜಸ್‌ ಸ್ಥಳದಲ್ಲೇ ಮೃತಪಟ್ಟರು.

ಘಟನ ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಪಿ.ಎಸ್‌., ಸಹಾಯಕ ಎಂಜಿನಿಯರ್‌ ಟೆಕ್ನಿಕಲ್‌ ವಿಭಾಗದ ಸೋಮೇಶ್‌, ಸಹಾಯಕ ಎಂಜಿನಿಯರ್‌ ಅಯ್ಯನ ಗೌಡ ಪಾಟೀಲ್‌ ಅವರು ಭೇಟಿ ನೀಡಿದರು. ದುರಂತದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ವಿರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next