Advertisement

ಭಗೀರಥ ಕಾಮೇಗೌಡರಿಗೆ ಜೀವಿತಾವಧಿ ಉಚಿತ ಪಾಸ್‌

07:07 AM Jul 03, 2020 | Lakshmi GovindaRaj |

ಬೆಂಗಳೂರು: “ಆಧುನಿಕ ಭಗೀರಥ’ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರ ಅಪರಿಮಿತ ಸಾಧನೆಗಾಗಿ ಕೆಎಸ್‌ಆರ್‌ಟಿಸಿ ಜೀವಿತಾವಧಿಯ ಉಚಿತ ಬಸ್‌ ಪಾಸ್‌ ನೀಡಲು ಸರ್ಕಾರ ಆದೇಶಿಸಿದೆ.  ಕಾಮೇಗೌಡರ ಸಾಧನೆಯನ್ನು ಗುರುತಿಸಿ ಜೀವಿತಾವಧಿ ಪಾಸ್‌ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚಿಸಿದ್ದಾರೆ.

Advertisement

ಈ ಪಾಸ್‌ನಲ್ಲಿ ಕಾಮೇಗೌಡರು ವೋಲ್ವೋ, ರಾಜಹಂಸ ಸೇರಿ ಎಲ್ಲ ಪ್ರಕಾರದ ಬಸ್‌ಗಳಲ್ಲಿ ಉಚಿತವಾಗಿ  ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ. ಈಚೆಗೆ ಕಾಮೇಗೌಡರ ಪರಿಸರ ಕಾಳಜಿ ಮತ್ತು ಸಾಧನೆಯನ್ನು ಸ್ವತಃ ಪ್ರಧಾನಿ ಮೋದಿ “ಮನ್‌ ಕಿ ಬಾತ್‌’ನಲ್ಲಿ ಉಲ್ಲೇಖೀಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next