Advertisement
ಇಂಥದೊಂದು ಸಂದರ್ಭವನ್ನು ನೆನೆಸಿಕೊಂಡರೆ ಒಂದುಕ್ಷಣ ಕೈಕಾಲುಗಳೇ ಆಡುವುದಿಲ್ಲ! ಆದರೆ ಇದು ಈಗಾಗಲೇ ಅನೇಕರ ಬಾಳಲ್ಲಿ ಘಟಿಸಿದೆ! ಇದ್ದಕ್ಕಿದ್ದಂತೆ ವಕ್ಕರಿಸಿದ ಕೋವಿಡ್ ಇದಕ್ಕೆಲ್ಲ ಕಾರಣ. ಬರುತ್ತಿದ್ದ ಅಷ್ಟೋ ಇಷ್ಟೋ ಸಂಬಳದಲ್ಲಿ ಅಚ್ಚುಕಟ್ಟಾಗಿ ಜೀವನ ಸಾಗಿಸುತ್ತಿದ್ದವರ ಪೈಕಿ ಅನೇಕರು ಈ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಂಡಿಲ್ಲ.ಕೆಲವರುಕೀಳಿರಿಮೆ, ಮಾನಸಿಕ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೂ ಇದೆ. ಇಂತಹವರ ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ಕಳೆದು ಹೋದ ದಿನಗಳ ಬಗ್ಗೆ ಚಿಂತಿಸುತ್ತಾಕೂರದೇ,ಕಾಲ ಹರಣ ಮಾಡದೇ ಮತ್ತೂಂದು ಕೆಲಸಕ್ಕೆ ಕೈ ಹಾಕಿ ಜೀವನದ ಗತಿಯನ್ನೇ ಬದಲಿಸಿಕೊಂಡಿದ್ದಾರೆ! ಇವರ ಯಶೋಗಾಥೆ, ಈ ಕೋವಿಡ್ ಕಾಲಕ್ಕಷ್ಟೇ ಸೀಮಿತ ಅನಿಸುವುದಿಲ್ಲ. ಬದಲಾಗಿ, ಜೀವಿತದ ಉದ್ದಕ್ಕೂ ನಾವು ಬದುಕಿ ಬಾಳುವ ರೀತಿಯ ಬಗ್ಗೆ ಪಾಠ ಮಾಡುವಂತಿವೆ!
Related Articles
Advertisement
ಕೈಹಿಡಿದದ್ದುಕುಲ ಕಸುಬು :
ಕೂಡ್ಲಿಗಿಯ ಪರಶುರಾಮ್ಗೆ ಚಿಕ್ಕಂದಿನಿಂದಲೂ ಕುಲ ಕಸುಬು ಆದ ಕ್ಷೌರಿಕ ವೃತ್ತಿಯ ಆಚೆ ಒಂದು ಸುಂದರ ಮತ್ತು ಗೌರವಯುತ ಬದುಕುಕಟ್ಟಿಕೊಳ್ಳುವ ಆಸೆ. ಇದು ಆತನ ಪೋಷಕರ ಒತ್ತಾಸೆಕೂಡ ಆಗಿತ್ತು. ಕಷ್ಟಪಟ್ಟು ಬಿ.ಇಡಿ ಮುಗಿಸಿ, ಆಮೇಲೆ ಇತಿಹಾಸ ವಿಭಾಗದಲ್ಲಿ ಎಂ.ಎ ಮಾಡಿ ಕೂಡ್ಲಿಗಿಯ ಹಿರೇಮಠ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾದ.ಕೊರೊನಾಕಾರಣಕ್ಕೆ ಇದ್ದಕ್ಕಿದ್ದಂತೆ ನೌಕರಿ ಹೋಯಿತು. ಪರಶುರಾಮ್ಕಿಂಚಿತ್ತೂ ಬೇಸರಿಸಿಕೊಳ್ಳದೇ ಈಗ ತಮ್ಮಕುಲಕಸುಬಾದ ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ! ಇದೇ ಊರಿನ ಅಮೀರ್, ಸಸ್ಯಶಾಸ್ತ್ರದ ಲೆಕ್ಚರರ್ ಆಗಿದ್ದವ. ಈಗ ಚಿಕ್ಕನ್ ಅಂಗಡಿ ನಡೆಸುತ್ತಿದ್ದರೆ, ಅರ್ಥಶಾಸ್ತ್ರ ಉಪನ್ಯಾಸಕ ಆಗಿದ್ದ ತೂಗದೆಲೆ ರಾಘ ವೇಂದ್ರ ಮಾಸ್ಕ್ ಗಳನ್ನು ಮಾರಿ, ಈಗ ಸೌತ್ ಕಂಪನಿಯೊಂದರಲ್ಲಿ ಕೂಲಿ ಮಾಡುತ್ತಿದ್ದಾನೆ!
ಧೃತಿಗೆಡದಿರಿ.. :
ಇವರೆಲ್ಲರ ಬಾಳಕಥೆಗಳು ಸ್ಯಾಂಪಲ್ ಅಷ್ಟೇ. ಇಂತಹ ಹತ್ತಾರು ಜನ ನಮ್ಮ ನಿಮ್ಮ ನಡುವೆ ಇದ್ದಾರೆ. ಇವರಲ್ಲಿ ಅನೇಕರು ಈಗಾಗಲೇ ತಮ್ಮ ಮೂಲ ವೃತ್ತಿಗೆ ಮರಳುವ ಯೋಚನೆಯನ್ನೇ ಬಿಟ್ಟಿದ್ದಾರೆ! ಹೀಗೆ ಇವರು ಜೀವನ ಹಸನು ಮಾಡಿಕೊಳ್ಳಲಿಕ್ಕೆಕಾರಣ ಇವರಲ್ಲಿನ ಆತ್ಮಸ್ಥೈರ್ಯ! ಇಂತಹವರು ನಮಗೆ ಪ್ರೇರಣೆ ಆಗಬೇಕು. ಎಂತಹಕಡುಕಷ್ಟ ಬಂದರೂಧೃತಿಗೆಡದೆ ಧೃಢವಾಗಿ ನಿಲ್ಲಬೇಕು.ಕಷ್ಟಗಳಿಗೆ ಬೆನ್ನು ತೋರದೆ ಧೈರ್ಯದಿಂದ ಎದುರಿಸಬೇಕು. ಯಾವುದೇಕಾರಣಕ್ಕೂ ಆತಂಕಕ್ಕೆ ಒಳಗಾಗಿ, ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ಕೌಶಲ್ಯ ಬೆಳೆಸಿಕೊಳ್ಳಿ.. :
ಓದು, ಉದ್ಯೋಗದೊಟ್ಟಿಗೆ ಯಾವುದಾದರೊಂದು ಕೌಶಲ್ಯ ರೂಢಿಸಿಕೊಳ್ಳಿ. ನಿಮ್ಮಕುಲ ಕಸುಬು, ಕರಕುಶಲತೆ.. ಹೀಗೆ ಯಾವುದೇ ಆಗಿರಲಿ. ಇದುನಿಮ್ಮನ್ನು ರಿಲ್ಯಾಕ್ಸ್ ಮೂಡಿನಲ್ಲಿ ಇಡುವುದಷ್ಟೇ ಅಲ್ಲದೆ, ಇಂತಹ ಸಂಕಷ್ಟದ ದಿನಗಳಲ್ಲಿಕಾಪಾಡುತ್ತದೆ. ನೀವು ನಂಬಿದ ಉದ್ಯೋಗ ಇಲ್ಲವಾದಾಗ ಜೊತೆಯಾಗಿ ನಿಲ್ಲುತ್ತದೆ. ಹಣದ ಅಡಚಣೆಯನ್ನು ನೀಗಿಸುತ್ತೆ. ಹೀಗಾಗಿ ಒಂದಿಷ್ಟು ಸಮಯವನ್ನುಕೌಶಲ್ಯ ಅಭಿವೃದ್ಧಿಗೆ ಮೀಸಲಿಡಿ.
ಮಿತ ಉಳಿತಾಯ ಇರಲಿ.. ಇದ್ದಾಗ ದುಂದು ವೆಚ್ಚ ಮಾಡಿ, ಇಲ್ಲದಾಗ ಕೊರಗುವುದು ಸಲ್ಲದು. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಪೈಸೆ ಪೈಸೆಗೂಲೆಕ್ಕ ಹಾಕಿಉಳಿತಾಯ ಮಾಡಿ. ಹೀಗೆ ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಂಡಾಗ ತತ್ಕ್ಷಣದ ಜೀವನ ನಿರ್ವಹಣೆಗೆ ಮತ್ತು
ಮುಂದೆ ಕೈಗೊಳ್ಳಲಿರುವ ಉದ್ಯೋಗಕ್ಕೆ ಆ ಹಣ ಬಂಡವಾಳ ಆಗುತ್ತದೆ! ಸುಂದರ ಭವಿಷ್ಯಕ್ಕೋಸ್ಕರ ಬರುವ ಆದಾಯದಲ್ಲಿ ಅಲ್ಪ-ಸ್ವಲ್ಪ ಉಳಿಸುವುದನ್ನುಈಗಿನಿಂದಲೇ ಕಲಿಯಿರಿ. ಹೀಗೆ ಮಾಡಿದರೆಬೇಗನೆ ಸ್ವಲ್ಪ ಮಟ್ಟಿಗೆ ಆದರೂಚೇತರಿಸಿಕೊಳ್ಳಲಿಕ್ಕೆ ಸಾಧ್ಯ. ನಿಮ್ಮ ಪರಿಸರದಲ್ಲಿ ಯಾವ ಉದ್ಯೋಗ ಮಾಡಿದರೆ ಕ್ಲಿಕ್ ಆಗುತ್ತೇವೆ ಎನ್ನುವ ಬಗ್ಗೆ ಸ್ಪಷ್ಟತೆ ಪಡೆದು ಮುಂದೆ ಹೆಜ್ಜೆ ಇಡಿ.
– ಸ್ವರೂಪಾನಂದ ಕೊಟ್ಟೂರು