Advertisement

ಎಲ್‌ಐಸಿಯಿಂದ ‘ಬಿಮಾ ರತ್ನ’ಯೋಜನೆ

11:54 PM May 30, 2022 | Team Udayavani |

ಬೆಂಗಳೂರು: ಪ್ರತಿಷ್ಠಿತ ಭಾರತೀಯ ಜೀವನ ವಿಮಾ ನಿಗಮ(ಎಲ್‌ಐಸಿ)ವು ಗ್ರಾಹಕರ ಅನುಕೂಲಕ್ಕಾಗಿ “ಬಿಮಾ ರತ್ನ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಮೇ 27ರಿಂದಲೇ ಜಾರಿಗೆ ಬಂದಿದೆ.

Advertisement

ಉದ್ದೇಶಿತ ಯೋಜನೆಯಲ್ಲಿ ಪಾಲಿಸಿದಾರರಿಗೆ ಜೀವನ ಭದ್ರತೆ ಜತೆಗೆ ಉಳಿತಾಯವನ್ನೂ ಮಾಡ ಬಹುದಾಗಿದೆ. ಕನಿಷ್ಠ 15 ವರ್ಷ, 20 ಮತ್ತು 25 ವರ್ಷ ಎಂಬ ಮೂರು ಹಂತಗಳ ಅವಧಿಯ ಯೋಜನೆ ಇದಾಗಿದೆ. ಪ್ರೀಮಿಯಂ ಪಾವತಿ ಅವಧಿಯು ಒಟ್ಟಾರೆ ಅವಧಿಯ ನಾಲ್ಕು ವರ್ಷ ಕಡಿಮೆ ಇರುತ್ತದೆ.

ಪಾಲಿಸಿಯು ಕನಿಷ್ಠ 5 ಲಕ್ಷ ರೂ. ಮೊತ್ತದ್ದಾಗಿದ್ದು, ಪಾಲಿಸಿಯನ್ನು ಬ್ಯಾಂಕ್‌ಗಳು ಸಹಿತ ಎಲ್‌ಐಸಿ ಏಜೆಂಟರು, ವಿಮಾ ಮಾರುಕಟ್ಟೆ ಸಂಸ್ಥೆಗಳು (ಐಎಂಎಫ್), ಬ್ರೋಕರ್‌ಗಳು, ಸಿಪಿಎಸ್ಸಿ-ಎಸ್‌ಪಿವಿ ಮೂಲಕ ಮಾಡಿಸಬಹುದು.

ಪಾಲಿಸಿದಾರ ಸಾವನ್ನಪ್ಪಿದರೆ, ಕುಟುಂಬಕ್ಕೆ ಹಣಕಾಸಿನ ನೆರವು ದೊರೆಯಲಿದೆ. ಈ ನೆರವು ಮೂಲ ವಿಮಾ ಮೊತ್ತದ ಶೇ. 125ರಷ್ಟು ಅಥವಾ ಪಾಲಿಸಿದಾರ ಪಾವತಿಸುತ್ತಿದ್ದ ವಾರ್ಷಿಕ ಪ್ರೀಮಿಯಂನ ಏಳುಪಟ್ಟು ಆಗಿರುತ್ತದೆ. ಸಾಲ ಪಡೆಯುವ ಅವಕಾಶವೂ ಇದೆ ಎಂದು ಎಲ್‌ಐಸಿ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next