Advertisement

ಕೆರೆಗಳ ಡಿನೋಟಿಫೈ ಮಾಡದಂತೆ ಗೌರ್ನರ್‌ಗೆ ಪತ್ರ

07:55 AM Aug 02, 2017 | Team Udayavani |

ಬೆಂಗಳೂರು: ನಿರ್ಜೀವ ಕೆರೆಗಳ ಡಿ ನೋಟಿಫಿಕೇಷನ್ ಪ್ರಸ್ತಾಪದ ಹಿಂದೆ ರಿಯಲ್‌ ಎಸ್ಟೇಟ್‌ ಮಾμಯಾಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂದು ಆರೋಪಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಯಾವುದೇ
ಕಾರಣಕ್ಕೂ ಕೆರೆಗಳ ಡಿ ನೋಟಿಫಿಕೇಷನ್ ಮಾಡದಂತೆ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ರಾಜ್ಯಪಾಲ
ವಿ.ಆರ್‌.ವಾಲಾ ಅವರಿಗೆ ಪತ್ರ ಬರೆದಿದ್ದಾರೆ. ನಿರ್ಜೀವ ಕೆರೆಗಳ ಡಿ ನೋಟಿಫಿಕೇಷನ್ ಮಾಡುವ ವಿಚಾರ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ರಿಯಲ್‌ ಎಸ್ಟೇಟ್‌ ಮಾμಯಾಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next