Advertisement

ವೈದ್ಯರ ಕೊರತೆ ನೀಗಿಸಲು ಪತ್ರ: ತಮ್ಮಣ್ಣ

04:41 AM Jun 11, 2020 | Lakshmi GovindaRaj |

ಮದ್ದೂರು: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಈಗಾಗಲೇ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಪತ್ರ ವ್ಯವಹಾರ ನಡೆಸಿರುವು ದಾಗಿ ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ  ನೂತನವಾಗಿ ಆರಂಭಗೊಂಡ ಆಧುನಿಕ ತಂತ್ರಜ್ಞಾನದ ಎಕ್ಸರೇ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಕೋಟ್ಯಂತರ ರೂ.ವೆಚ್ಚದಲ್ಲಿ ತಾಲೂಕು ಆಸ್ಪತ್ರೆಯನ್ನು ನೂತನವಾಗಿ ನಿರ್ಮಾಣ ಮಾಡಿದ್ದು ಹಲವು ವರ್ಷ ಗಳಿಂದಲೂ  ವೈದ್ಯರ ಕೊರತೆಯಿದೆ. ಇದನ್ನು ಸರಿದೂಗಿಸಲು ಈಗಾಗಲೇ ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾ ಡಿಎಚ್‌ಒ ಅವರಿಗೆ ಪತ್ರ ಬರೆದಿರುವು ದಾಗಿ ತಿಳಿಸಿದರು. ವೈದ್ಯರ ಕೊರತೆ ನೀಗಿಸಲು ತಾಲೂಕು ಪ್ರಾಥಮಿಕ ಕೇಂದ್ರಗಳ ವೈದ್ಯರನ್ನು  ಎರವಲು ಪಡೆಯಲು ಸೂಚನೆ ನೀಡಿದ್ದು ಬೇರೆಡೆ ಕರ್ತವ್ಯ ನಿರ್ವಹಿಸುವ ವೈದ್ಯ ರನ್ನು ತಾಲೂಕು ಆಸ್ಪತ್ರೆಗೆ ನಿಯೋಜನೆ ಮಾಡಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಹಾಗೆಯೇ ವೈದ್ಯರಿಗೆ 1.10 ಲಕ್ಷರೂ. ವೇತನ ನೀಡಿದರೂ ವೈದ್ಯರ ಕೊರತೆ ಕಂಡು ಬಂದಿರುವುದಾಗಿ ಹೇಳಿ ದರು. ಈಗಾಗಲೇ ಹಲವು ವೈದ್ಯಕೀಯ ಸೌಲಭ್ಯ ಕಲ್ಪಿಸಿದ್ದು 4 ಕೋಟಿ ರೂ. ವೆಚ್ಚ ದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಜತೆಗೆ ಕುಡಿವ ನೀರು, ಶೌಚಾಲಯ, ವಿದ್ಯುತ್‌, 100 ಹಾಸಿಗೆಗಳ ವ್ಯವಸ್ಥೆ  ಕಲ್ಪಿಸಿದ್ದು ಬಡ ವರು, ಕೂಲಿ ಕಾರ್ಮಿಕರು, ಹಿಂದು ಳಿದ ವರ್ಗದವರು ಇದರ ಸದುಪಯೋಗಕ್ಕೆಮುಂದಾಗಬೇಕೆಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಪ್ರೇಮ ಲತಾಗೂಗಿ, ವೈದ್ಯರಾದ  ಮಧು, ಶಿವಕುಮಾರ್‌, ಚಿಕ್ಕಬೋರೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next