Advertisement

ಬೆಣ್ಣೆಹಳ್ಳಿ ಕೂಲಿ ಕಾರ್ಮಿಕರಿಂದ ಪತ್ರ ಚಳವಳಿ

01:16 PM Sep 24, 2019 | Team Udayavani |

ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಹಣ ಬಿಡುಗಡೆಗಾಗಿ ಒತ್ತಾಯಿಸಿ ಕೂಲಿಕಾರರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತಿರುವ ಚಳವಳಿ ಮುಂದುವರೆದಿದ್ದು ಇದೀಗ ತಾಲೂಕಿನ ಬೆಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರು ಪತ್ರ ರವಾನಿಸಿದ್ದಾರೆ.

Advertisement

ತಾಲೂಕಿನ ಬೆಣ್ಣೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 7 ತಿಂಗಳ ಹಿಂದೆ ಬದು ನಿರ್ಮಾಣ ಮತ್ತು ಕೃಷಿ ಹೊಂಡ, ಚೆಕ್‌ ಡ್ಯಾಂ ಹುಳು ತೆಗೆದು ಹಾಕಿದ್ದೇವೆ. ಆದರೆ ಈವರೆಗೂ ಕೂಲಿ ಹಣ ಬಂದಿರುವುದಿಲ್ಲ. ತಕ್ಷಣವೇ ಕೂಲಿ ಹಣ ಬಿಡುಗಡೆ ಮಾಡಬೇಕು ಹಾಗೂ ಹೆಚ್ಚುವರಿ 100 ಮಾನವ ದಿನಗಳ ಕೆಲಸ ಕೊಡಬೇಕು ಎಂದು ಪ್ರಧಾನಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ಪತ್ರ ಚಳವಳಿ ನಡೆಸಿದ ಗ್ರಾಮಸ್ಥರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ. ಒಂದೆಡೆ ನಿರಂತರ ಬರಗಾಲದಿಂದ ನಮಗೆ ಕೆಲಸ ಸಿಗುತ್ತಿಲ್ಲ. ಮತ್ತೂಂದೆಡೆ ಮಾಡಿದ ಕೆಲಸಕ್ಕೆ ಕೂಲಿ ಹಣವೂ ಸಿಗುತ್ತಿಲ್ಲ. ಜೀವನ ನಡೆಸುವುದೇ ದುಸ್ತರವಾಗಿದೆ. ಅದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ ಎಂದು ಗ್ರಾಮದ ಕೂಲಿಕಾರರು ತಿಳಿಸುತ್ತಾರೆ. ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತೆ ಶ್ರುತಿ, ಗ್ರಾಮದ ಕೂಲಿಕಾರರಾದ ಹೊನ್ನಮ್ಮ, ಬಸಮ್ಮ, ಹುಸೇನ್‌ಬಿ, ನಿರ್ಮಲ, ಲತಾ, ಪೂರ್ಣಜ್ಯೋತಿ, ಶಾರದಮ್ಮ, ರೂಪ, ದೀಪ,ಈರಮ್ಮ ರತ್ಮಮ್ಮ, ಕೆಂಚಮ್ಮ, ಗಂಗಮ್ಮ, ಭಾಗ್ಯಮ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next