Advertisement
ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳು ಭರ ದಿಂದ ನಡೆದಿದ್ದು, ಈಗಾಗಲೇ ಪಟ್ಟಣದ ಮುಖ್ಯರಸ್ತೆಗಳು ಸೇರಿದಂತೆ ಹಲವು ಕಡೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದ್ದು, ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನದ ಆವರಣದಲ್ಲಿ ಬೃಹತ್ಗಾತ್ರದ ಶಾಮಿಯಾನ ಹಾಕಲಾಗಿದೆ. ಮೆರವಣಿಗೆ ಹೊರಡುವ ಮುಖ್ಯ ರಸ್ತೆಗಳನ್ನು ಮಾವಿನ ತೋರಣ ಗಳಿಂದ ಶೃಂಗರಿಸಿದ್ದು, ಕಣ್ಮನ ಸೆಳೆಯುತ್ತಿದೆ.
Related Articles
ಉದ್ಘಾಟನಾ ಸಮಾರಂಭ: ಶುಕ್ರವಾರ ಬೆಳಗ್ಗೆ 11ಕ್ಕೆ ಸ್ವಾಗತ ನೃತ್ಯ, ನಾಡಗೀತೆ, ರೈತಗೀತೆ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಸ್ವಾಗತಿಸ ಲಿರುವ ಕಾರ್ಯ ಕ್ರಮದಲ್ಲಿ ಹಿರಿಯ ವಿದ್ವಾಂಸ ಪ್ರೋ. ಮಲೆಯೂರು ಗುರು ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಳಿದ್ದು, ಸಂಸದ ಆರ್. ಧ್ರುವನಾರಾಯಣ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್ ಮತ್ತಿತರರ ಗಣ್ಯರು ಉಪಸ್ಥಿತರಿರುವ ಸಮಾರಂಭದಲ್ಲಿ ಸಾಹಿತಿ ಕ್ಷೀರಸಾಗರ್ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.
Advertisement
ಕವಿಗೋಷ್ಠಿ: ಮಧ್ಯಾಹ್ನ 4.30ಕ್ಕೆ ಕವಿಗೋಷ್ಠಿ, ವಿಶೇಷ ಗೋಷ್ಠಿ ನೇರವೆರಲಿದ್ದು, ಡಿ.8ರ ಎರಡನೇ ದಿನವೂ ಗೋಷ್ಠಿಗಳು ನಡೆಯಲಿದ್ದು, ಸಂಜೆ 5ಗಂಟೆಗೆ ನಡೆವ ಸಮಾರೋಪದಲ್ಲಿ ಶಾಸಕ ಅನಿಲ್ ಅಧ್ಯಕ್ಷತೆ ವಹಿಸಲಿದ್ದು, ಕವಿ ಡಾ. ಟಿ.ಸಿ. ಪೂರ್ಣಿಮಾ ಸಮಾರೋಪ ಭಾಷಣ ಮಾಡಲಿದ್ದಾರೆ.ವಿಚಾರಗೋಷ್ಠಿ: ಮಧ್ಯಾಹ್ನ 3ಕ್ಕೆ “ಹೆಗ್ಗಡ ದೇವನಕೋಟೆ ತಾಲೂಕು ದರ್ಶನ’ ಕುರಿತು ವಿಚಾರಗೋಷ್ಠಿ ಏರ್ಪಡಿಸ ಲಾಗಿದ್ದು, ಗೋಷ್ಠಿಯನ್ನು ಮೈಸೂರು ಸಾರ್ವಜನಿಕ ಗ್ರಂಥಾಲಯ ಉಪ ನಿರ್ದೇಶಕ ಡಾ. ಬಿ. ಮಂಜುನಾಥ್ ಉದ್ಘಾಟಿಸಲಿದ್ದು, ಉಪನ್ಯಾಸಕ ಎಂ.ಎನ್. ರವಿಶಂಕರ್ ತಾಲೂಕು ಸಂಸ್ಕೃತಿ ಸೊಬಗು ಮತ್ತು ಶಾಸನಗಳು ಎಂಬ ವಿಚಾರ ಮಂಡನೆ ಮಾಡಲಿದ್ದಾರೆ.