Advertisement

ಲಾಕ್‌ಡೌನ್‌ ಮುನ್ನ ಪರಿಹಾರ ಘೋಷಿಸಲಿ: ರೇವಣ್ಣ

06:45 PM May 08, 2021 | Team Udayavani |

ಹಾಸನ: ಲಾಕ್‌ಡೌನ್‌ ನಿರ್ಧಾರ ಕೈಗೊಳ್ಳುವ ಮೊದಲು ಬಡವರಿಗೆ 500ರ ರೂ.ಪರಿಹಾರ, 10 ಕೆ.ಜಿ. ಅಕ್ಕಿಹಾಗೂ ಅಗತ್ಯ ವಸ್ತುಗಳನ್ನು ಕೊಡಬೇಕು ಎಂದು ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಕಾಏಕಿ ಲಾಕ್‌ ಡೌನ್‌ಮಾಡಿದರೇ ಬಡವರು ಸಂಕಷ್ಟಕ್ಕೆ ಸಿಲುಕುವರು. ಕೂಡಲೇ ವಿಶೇಷ ಪ್ಯಾಕೇಜ್‌ಘೋಷಣೆ ಮಾಡುವ ಮೂಲಕ 5000 ರೂ. ಪರಿಹಾರ ಮತ್ತು 10 ಕೆ.ಜಿ. ಅಕ್ಕಿ ಸೇರಿಅಗತ್ಯ ವಸ್ತುಗಳನ್ನು ಕೊಟ್ಟು ಲಾಕ್‌ಡೌನ್‌ ಮಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದರು.

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಯಲ್ಲಿ ಲೂಟಿಮಾಡುತ್ತಿದ್ದು, ಮುಂದೆನೂ ಇದೆ ರೀತಿ ಮುಂದುವರಿದರೇ ಶವ ತಂದುಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದುಎಚ್ಚರಿಸಿದರು. ಜಿಲ್ಲೆಯಲ್ಲಿ ಯಾವುದೇ ಮೆಡಿಸಿನ್‌ ಸಿಗುತ್ತಿಲ್ಲ. ಇಲ್ಲಿ ಹೇಳ್ಳೋರು, ಕೇಳ್ಳೋರು ಯಾರೂಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಗೆ ಒಂದು ಸಾವಿರ ರೆಮ್‌ಡೆಸಿವಿಯರ್‌ಇಂಜೆಕ್ಷನ್‌ ಬೇಕಾಗಿದೆ. ಜಿಲ್ಲೆಯಲ್ಲಿ 200 ಆಕ್ಸಿಜನ್‌ ಸಿಲಿಂಡರ್‌ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಅದುನಾಳೆಯಷ್ಟರೊಳಗೆ 400 ಆಗಬಹುದು. ಆದರೇ ಕೆಲವು ರಾಜಕೀಯ ಮುಖಂಡರು ರೆಮ್‌ಡೆಸಿವಿಯರ್‌ಮಾರಾಟ ಮಾಡಿಸುತ್ತಿದ್ದಾರೆ. ಜತೆಗೆ ಕಾಳಸಂತೆಯಲ್ಲಿಯೂ ಒಂದಕ್ಕೆ 18 ಸಾವಿರ ರೂ.ಗೆ ಮಾರಾಟಮಾಡಲಾಗುತ್ತಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next