Advertisement

ಯುವಕರು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಲಿ: ಹಿರಿಯ ಪತ್ರಕರ್ತ ಶ್ರೀಶೈಲ ಕೆ.ಬಿರಾದಾರ

01:39 PM Jun 19, 2022 | Team Udayavani |

ಬಾಗಲಕೋಟೆ: ಯುವಕರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಶ್ರೀಶೈಲ ಕೆ.ಬಿರಾದಾರ ಹೇಳಿದರು.

Advertisement

ಅಮೀನಗಡ ಶಾದಿಮಹಲ್‌ನಲ್ಲಿ ಪತ್ರಕರ್ತ ಎಚ್‌.ಎಚ್‌.ಬೇಪಾರಿಯವರ ಬರಹದ ಬೆಳಕು ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿ, ಆಧುನಿಕ ದಿನಮಾನಗಳಲ್ಲಿ ಎಲ್ಲ ಕ್ಷೇತ್ರವೂ ಉದ್ಯಮವಾಗಿವೆ. ಆದರೆ ಸಾಹಿತ್ಯ ಮಾತ್ರ ಸಾಹಿತ್ಯೋದ್ಯಮವಾಗಿಲ್ಲ. ಅದು ಸಾಹಿತ್ಯಕ್ಷೇತ್ರದ ಶಕ್ತಿ ಎಂದರು.

ಪತ್ರಕರ್ತ ಎಚ್‌.ಎಚ್‌.ಬೇಪಾರಿ ಅವರಲ್ಲಿ ಬರವಣಿಗೆಯ ಹಸಿವಿದೆ ವರದಿಗಾರರಾಗಿ ತಮ್ಮ ಭಾಗದಲ್ಲಿ ನಡೆದ ಹಲವಾರು ಘಟನೆಗಳನ್ನು ಪತ್ರಿಕೆಗಳಲ್ಲಿ ಬರೆದು ಅದರಲ್ಲಿ ವಿಶೇಷವಾಗಿರುವ ಬರಹಗಳನ್ನು ಆಯ್ದು ಸಂಗ್ರಹಿಸಿ ಕೃತಿ ರಚನೆ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದು ಖುಷಿಯ ವಿಷಯ ಇಂತಹ ಕೃತಿಗಳು ನೂರಾಗಲಿ, ಸಾಹಿತ್ಯ ಲೋಕಕ್ಕೂ ಅವರ ಬರವಣಿಗೆ ವಿಸ್ತಾರಗೊಳ್ಳಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಚ್‌ ಡಿಸಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಪ್ರತಿಭೆ ಯಾರ ಸ್ವತ್ತು ಅಲ್ಲ. ಪ್ರತಿಭೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸಹಕಾರ ಇದೆ. ಪತ್ರಕರ್ತ ಎಚ್‌.ಎಚ್‌. ಬೇಪಾರಿ ಅವರು ಸಮಾಜಮುಖೀಯಾಗಿ ನಮ್ಮ ಪರಿಸರದಲ್ಲಿ ಆಗಿರುವ ಹಲವಾರು ಘಟನೆಗಳನ್ನು ಪತ್ರಿಕೆಯ ಮೂಲಕ ಬರೆದು ಎಚ್ಚರಗೊಳಿಸಿ ಅವುಗಳಿಗೆ ನಿಶ್ಚಿತವಾಗಿ ರೂಪಕೊಡುವಲ್ಲಿ ಯಶ್ವಸಿಯಾಗಿದ್ದಾರೆ. ವರದಿಗಾರರಾಗಿ ಕೆಲಸ ಮಾಡುವುದರ ಜತೆಗೆ ಚಿಕ್ಕ ವಯಸ್ಸಿನಲ್ಲಿ ಪತ್ರಿಕಾ ಬರಹಗಳನ್ನು ಸಂಗ್ರಹಣೆ ಮಾಡಿ ಕೃತಿ ರಚನೆ ಮಾಡಿದ್ದು, ಉತ್ತಮ ಕಾರ್ಯ ಅವರ ಕೃತಿಗಳು ಹೆಚ್ಚಾಗಲಿ ಎಂದು ಶುಭಹಾರೈಸಿದರು.

ಅದ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್‌.ಜಿ.ಸನ್ನಿ, ಅಂಜುಮನ್‌ ಕಮಿಟಿ ಅಧ್ಯಕ್ಷ ಅಜಮೀರ ಮುಲ್ಲಾ, ಹಿರಿಯ ಲೇಖಕ ಶಿಕ್ಷಕ ಸಿದ್ದಲಿಂಗಪ್ಪ ಬೀಳಗಿ ಮಾತನಾಡಿದರು.ಸಾಹಿತಿ ಮಹಾದೇವ ಬಸರಕೋಡ ಕೃತಿಯನ್ನು ಪರಿಚಯಿಸಿದರು.

Advertisement

ಇದೇ ಸಂದರ್ಭದಲ್ಲಿ ಇಳಕಲ್ಲಿನ ಖ್ಯಾತ ಉದ್ಯಮಿ ರಾಜು ಬೋರಾ ಅವರಿಗೆ ಸನ್ಮಾನಿಸಲಾಯಿತು ಮತ್ತು ಕೃತಿಕಾರರಾದ ಎಚ್‌.ಎಚ್‌. ಬೇಪಾರಿ ಅವರಿಗೆ ವಿವಿಧ ಸಂಘಟನೆ, ಜನಪ್ರತಿನಿಧಿಗಳಿಂದ ಹಾಗೂ ವಿವಿಧ ಸಮಾಜದ ಮುಖಂಡರಿಂದ ಸನ್ಮಾನಿಸಲಾಯಿತು.

ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.ಪಪಂ ಸದಸ್ಯರಾದ ರಮೇಶ ಮುರಾಳ, ವಿಜಯಕುಮಾರ ಕನ್ನೂರ, ಸಂತೋಷ ಐಹೊಳ್ಳಿ, ಬಾಬು ಛಬ್ಬಿ, ಉದ್ಯಮಿ ಪೀರಾ ಖಾದ್ರಿ,ತಾಲ್ಲೂಕ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಮುಖ್ಯೋಪಾಧ್ಯಾಯ ಹಸನಬಸರಿ ಬೇಪಾರಿ, ಶ್ರೀಶೈಲ ತತ್ರಾಣಿ, ಹಿರಿಯರಾದ ಇಸ್ಮಾಯಿಲಸಾಬ ಬೇಪಾರಿ, ಮೀರಾಸಾಬ ಮುಲ್ಲಾ, ಕಾಶೀಮಸಾಬ ಬಾಗೇವಾಡಿ, ಡಿ.ಪಿ.ಅತ್ತಾರ, ಉಮರಸಾಬ ಬೇಪಾರಿ, ದಾವಲಸಾಬ ಬೇಪಾರಿ ಇದ್ದರು. ಶಿಕ್ಷಕ ಎಸ್‌.ಎಚ್‌. ಹೊಸಮನಿ ನಿರೂಪಿಸಿ, ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next