Advertisement

ನರೇಗಾ ಕೆಲಸದಲ್ಲಿ ಮಹಿಳೆಯರು ಪಾಲ್ಗೊಳ್ಳಲಿ

05:56 PM Jan 25, 2021 | Nagendra Trasi |

ವಿಜಯಪುರ: ಮಹಿಳಾ ಕಾಯಕ ಎಂಬುದು ಉತ್ಸವವಾಗಬೇಕಿರುವ ಕಾರಣ ಮಹಾತ್ಮ ಗಾಂಧಿಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು
ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಊರಲ್ಲೇ ಉದ್ಯೋಗ ಪಡೆಯಿರಿ ಎಂದು (ಮನರೇಗಾ) ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ ಕರೆ ನೀಡಿದರು. ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಮನರೇಗಾ ಯೋಜನೆಯಲ್ಲಿ ಮಹಿಳೆ ಸಹಭಾಗಿತ್ವ ಅತಿ ಕಡಿಮೆ ಇರುವ ಗ್ರಾಪಂಗಳಾದ ಕೋರಹಳ್ಳಿ, ಬಮ್ಮನಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಮಹಿಳಾ ಕಾಯಕೋತ್ಸವ ಅಭಿಯಾನದಲ್ಲಿ ಅವರು ಮಾತನಾಡಿದರು.

Advertisement

ಮಹಿಳಾ ಸಮಾನತೆಯೆಂಬುದನ್ನು ಇಲ್ಲಿನ ಮಣ್ಣಿನ ಕಣ ಕಣದಲ್ಲಿ 12ನೇ ಶತಮಾನದಲ್ಲೇ ಬಸವೇಶ್ವರು ಸಾರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಮಹಿಳಾ ಭಾವಹಿಸುವಿಕೆ ತುಂಬಾ ಕಡಿಮೆ ಇರುವುದು ಸರಿಯಲ್ಲ. ಕೊರಹಳ್ಳಿ ಗ್ರಾಮದಲ್ಲಿ ಶೇ. 24.25, ಬಮ್ಮನಹಳ್ಳಿ ಗ್ರಾಮದಲ್ಲಿ. ಶೇ. 23.30 ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ, ಗ್ರಾಮೀಣ ಪ್ರದೇಶದ ಮಹಿಳೆಯರು ನರೇಗಾ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನರೇಗಾ ಉದ್ಯೋಗ ಚೀಟಿಗಳು, ವೈಯಕ್ತಿಕ ಕಾಮಗಾರಿಗಳು, ಸಮುದಾಯ ಕಾಮಗಾರಿಗಳ ಕುರಿತು ಜನರಿಗೆ ಮಾಹಿತಿ ಇದೆಯೆ ಎಂಬುದರ ಬಗ್ಗೆ ಪರಿಶೀಲಿಸಿದರು. ಈ ವೇಳೆಯೆ ಸಮೀಕ್ಷಾ ತಂಡದ ಐಇಸಿ ಸಂಯೋಹಕರು ಹಾಗೂ ಗ್ರಾಪಂ ಸಿಬ್ಬಂದಿಗಳು ಮಾನ್ಯರ ಸಮ್ಮುಖದಲ್ಲಿ ಗ್ರಾಮಸ್ಥರಿಂದ ಕೆಲಸಕ್ಕೆ ಬೇಡಿಕೆ ಪಡೆದುಕೊಂಡರು. ಇನ್ನೂ ಕೊರಹಳ್ಳಿ ವ್ಯಾಪ್ತಿಯಲ್ಲಿ 1550 ಕುಟುಂಬಗಳಿದ್ದು, 1388 ಕುಟುಂಬಗಳಿಗೆ ಉದ್ಯೋಗ ಚೀಟಿ ಹೊಂದಿವೆ. 814
ಉದ್ಯೋಗ ಚೀಟಿಗಳು ಸಕ್ರಿಯಾಗಿವೆ.

ಸಮೀಕ್ಷೆ ವೇಳೆ ಉದ್ಯೋಗ ಚೀಟಿ ಸಂಖ್ಯೆ ಹೊಂದಿದ್ದು ಭೌತಿಕ ಪುಸ್ತಕ ಹೊಂದಿಲ್ಲದ ಕುಟುಂಬಗಳಿಗೆ ಸರ್ವೇ ಸಮಯದಲ್ಲಿ ಸ್ಥಳದಲ್ಲೇ ಉದ್ಯೋಗ ಚೀಟಿ ನೀಡುವಂತೆ ಸೂಚಿಸಿದರು. ಸಮೀಕ್ಷಾ ಅವ ಧಿಯಲ್ಲಿ ಕೊರಹಳ್ಳಿ ಗ್ರಾಮದಲ್ಲಿ ಬದು ನಿರ್ಮಾಣಕ್ಕೆ 35, ಕೃಷಿಹೊಂಡ 22, ತೆರೆದ ಬಾವಿಗೆ 1, ಜಾನುವಾರು ಶೇಡ್‌ 33, ಕಾಮಗಾರಿಗೆ ಬೇಡಿಕೆ ಪಡೆಯಲಾಗಿದೆ. ಸಕ್ರಿಯಾವಾಗಿರುವ ಉದ್ಯೋಗ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.

ಕಾಯಕೋತ್ಸವ ಅಭಿಯಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನಾ ಅಭಿಯಂತರೆ ಸ್ವಪ್ನ, ಇಒ ಸುನೀಲ ಮಡ್ಡಿನ್‌, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ, ಐಇಸಿ ಸಂಯೋಜಕಿ ಸುನಿತಾ ಮಂಜುನಾಥ, ವಿನಶಾ, ಫಾಜಿಲ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next