Advertisement

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

12:52 AM Jun 15, 2024 | Team Udayavani |

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ತಯಾರಾದ “ತುಡರ್‌’ ತುಳು ಸಿನೆಮಾ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ಮಂಗಳೂರಿನ ಬಿಜೈನ ಭಾರತ್‌ ಸಿನಿಮಾಸ್‌ನಲ್ಲಿ ಬಿಡುಗಡೆ ಸಮಾರಂಭ ನಡೆಯಿತು.

Advertisement

ಕರಾವಳಿ ಗ್ರೂಪ್‌ ಆಫ್‌ ಎಜುಕೇಶನ್‌ ಸಂಸ್ಥೆಯ ಚೇರ್ಮನ್‌ ಗಣೇಶ್‌ ರಾವ್‌ ಮಾತನಾಡಿ, “ತುಡರ್‌’ ಅಂದರೆ ಕನ್ನಡದಲ್ಲಿ “ಬೆಳಕು’ ಎಂದರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ತುಡರ್‌ ಸಿನೆಮಾ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಮಾಜಕ್ಕೆ ಮನೋರಂಜನೆಯ ಜತೆಗೆ ಒಳ್ಳೆಯ ಸಂದೇಶ ನೀಡುವ ಸಿನೆಮಾಗಳು ಬರಲಿ ಎಂದು ಶುಭ ಹಾರೈಸಿದರು.

ನಟ ಅರವಿಂದ್‌ ಬೋಳಾರ್‌ ಮಾತನಾಡಿ, ತುಡರ್‌ ಸಿನೆಮಾ ವೀಕ್ಷಿಸಿದವರು ಚಿತ್ರತಂಡವನ್ನು ಮೆಚ್ಚಿ ಬೆನ್ನುತಟ್ಟಿದ್ದಾರೆ. ಈ ಸಿನೆಮಾ ಗೆಲ್ಲಲು ತುಳುವರು ಟಾಕಿಸ್‌ಗೆ ಹೋಗಿ ಸಿನೆಮಾ ನೋಡಬೇಕು ಎಂದರು. ನಿರ್ದೇಶಕ, ನಿರ್ಮಾಪಕ ವಿಜಯ ಕುಮಾರ್‌ ಕೊಡಿಯಾಲಬೈಲು ಮಾತಾಡಿ, ಸಿನೆಮಾಕುರಿತು ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಸಿನೆಮಾ ಗೆಲ್ಲಲು ತುಳು ವರ ಆಶೀರ್ವಾದ ಅಗತ್ಯ ಎಂದರು.

ದೈಜಿವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ವಾಲ್ಟರ್‌ ನಂದಳಿಕೆ, ಭಾರತ್‌ ಸಿನೆಮಾಸ್‌ನ ಬಾಲಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಮನೋಹರ್‌ ಶೆಟ್ಟಿ, ಉದಯ ಪೂಜಾರಿ ಬಲ್ಲಾಳ್‌ ಬಾಗ್‌, ಉಮೇಶ್‌ ರೈ ಪದವು ಮೇಗಿನಮನೆ, ಸ್ವರಾಜ್‌ ಶೆಟ್ಟಿ, ನಟ ಸಿದ್ದಾರ್ಥ್ ಶೆಟ್ಟಿ, ನಟಿ ದೀûಾ ಭಿಸೆ, ರೂಪ ವರ್ಕಾಡಿ, ನಿರ್ದೇಶಕ ತೇಜೇಶ್‌ ಪೂಜಾರಿ, ಪ್ರಕಾಶ್‌ ಮಹಾದೇವನ್‌, ವಿಲ್ಸನ್‌ ರೆಬೆಲ್ಲೋ, ವಿದ್ಯಾ, ಸಂಪತ್‌, ಹರೀಶ್‌ ಶೆಟ್ಟಿ, ವಿಕಾಸ್‌ ಪುತ್ರನ್‌, ಮೋಹನ್‌ ರಾಜ್‌, ಪ್ರೇಮ್‌ ಶೆಟ್ಟಿ ಸುರತ್ಕಲ್‌, ಹಂಚಿಕೆದಾರ ಸಚಿನ್‌ ಎಸ್‌. ಉಪ್ಪಿನಂಗಡಿ ಮತ್ತಿತರರು ಉಪಸ್ಥಿತರಿದ್ದರು. ಚಿರಾಗ್‌ ಬಜಾಲ್‌ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳೂರಿನಲ್ಲಿ ರೂಪವಾಣಿ, ಭಾರತ್‌ ಸಿನಿಮಾಸ್‌, ಪಿವಿಆರ್‌, ಸಿನಿಪೊಲಿಸ್‌, ಸುರತ್ಕಲ್‌ನಲ್ಲಿ ಸಿನಿಗ್ಯಾ ಲಕ್ಸಿ, ಪಡುಬಿದ್ರೆಯಲ್ಲಿ ಭಾರತ್‌ ಸಿನಿಮಾಸ್‌, ಉಡುಪಿಯಲ್ಲಿ ಕಲ್ಪನಾ,ಭಾರತ್‌ ಸಿನಿಮಾಸ್‌, ಮಣಿಪಾಲದಲ್ಲಿ ಐನಾಕ್ಸ್‌, ಭಾರತ್‌ ಸಿನಿಮಾಸ್‌, ಕಾರ್ಕಳ ದಲ್ಲಿ ಪ್ಲಾನೆಟ್‌, ರಾ ಕಾ, ಪುತ್ತೂರಿನಲ್ಲಿ ಭಾರತ್‌ ಸಿನಿಮಾಸ್‌ ಬೆಳ್ತಂಗಡಿಯಲ್ಲಿ ಭಾರತ್‌ ಚಿತ್ರಮಂದಿರದಲ್ಲಿ ಬಿಡು ಗಡೆಯಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next