Advertisement

ಪಾಕ್‌ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಲಿ: ಎಂಬಿಪಿ

10:10 AM Feb 22, 2020 | Sriram |

ಬೆಂಗಳೂರು: ಪಾಕಿಸ್ಥಾನ ಒಂದು ದರಿದ್ರ ರಾಷ್ಟ್ರ ಆ ದೇಶದ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಲಿ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ಥಾನದ ಪರ ಘೋಷಣೆ ಕೂಗಿದ್ದು ಖಂಡನೀಯ. ಇದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಪಾಕಿಸ್ಥಾನ ಒಂದು ದರಿದ್ರ ರಾಷ್ಟ್ರ. ಅದರ ಜತೆ ಯಾಕೆ ಹೋಲಿಕೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ಅಮೂಲ್ಯಾ 19 ವರ್ಷ ವಯಸ್ಸಿನ ಹುಡುಗಿ ಇರಬೇಕು. ಇಂಥ ಘೋಷಣೆ ಕೂಗುತ್ತಾರೆ ಅಂದರೆ ಇದರ ಹಿಂದೆ ಯಾರಿ¨ªಾರೆ ಎನ್ನುವುದನ್ನು ನೋಡಬೇಕಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವ ಸತ್ಯಾಸತ್ಯತೆಯನ್ನು ತನಿಖೆ ಮಾಡಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಇದೇ ಕಾರ್ಯಕ್ರಮದಲ್ಲಿ ಕೆಲವು ಹೈದರಾಬಾದ್‌ ಮೂಲದ ನಾಯಕರೂ ಇದ್ದರು. ಈ ಬಗ್ಗೆಯೂ ಗೃಹ ಇಲಾಖೆ ಗಮನಹರಿಸಿ ತನಿಖೆ ಮಾಡಬೇಕಿದೆ. ಗೃಹ ಇಲಾಖೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಎಂ.ಬಿ ಪಾಟೀಲ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next