Advertisement
ನಗರದ ಪ್ರವಾಸಿ ಮಂದಿರದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಸೇರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದಾಗ, ಖಾಸಗೀಕರಣ ಪ್ರಸ್ತಾಪ ಬಿಟ್ಟು, ಸರ್ಕಾರವೇ ನಡೆಸುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ನಂತರ ಬದಲಾದ ರಾಜಕೀಯದ ಸಮಯದಲ್ಲೂ ನಾವು ಸುಮ್ಮನೆಕುಳಿತಿಲ್ಲ ಎಂದರು.
ಇತ್ತೀಚೆಗೆ ನಾನು ಸೇರಿದಂತೆ ಶಾಸಕರಾದ ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಕೆ.ಸುರೇಶ್ಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಲಿಖಿತವಾಗಿ ಮನವಿ ಮಾಡಲಾಗಿದೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಡೆದಿದ್ದ ಎಲ್ಲ ವಿಚಾರವನ್ನು ಅವರ ಗಮನಕ್ಕೆ ತಂದಿದ್ದು, ತುರ್ತಾಗಿ ಕಾರ್ಖಾನೆ ಆರಂಭಿಸಬೇಕು.
Related Articles
ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
Advertisement
ಖಾಸಗಿ ಕಾರ್ಖಾನೆಗಳ ಲಾಬಿ ನಿಯಂತ್ರಿಸಬೇಕು:ಹಿಂದೆಏಷ್ಯಾದಲ್ಲಿಯೇ ಮೈಷುಗರ್ ಕಾರ್ಖಾನೆ ಒಂದೇ ಇತ್ತು. ಆದರೆ ಈಗ ಇಡೀರಾಜ್ಯಾದ್ಯಂತ ಸಾಕಷ್ಟು ಖಾಸಗಿ ಕಾರ್ಖಾನೆಗಳಿವೆ.ಉತ್ತರಕರ್ನಾಟಕದ ಭಾಗಕ್ಕೆ ಹೋದರೆ ನಮ್ಮನ್ನು ಮೀರಿ ಕಾರ್ಖಾನೆಗಳಿವೆ.ಆಖಾಸಗಿ ಕಾರ್ಖಾನೆಗಳ ಲಾಬಿ ಜೋರಾಗಿದ್ದು, ಖಾಸಗಿ ಕಾರ್ಖಾನೆಗಳ ಲಾಬಿ ನಿಯಂತ್ರಿಸಬೇಕಾದರೆ ಸರ್ಕಾರಿ ಕಾರ್ಖಾನೆ ಆರಂಭಿಸುವುದು ಅನಿ ವಾರ್ಯ ಹಾಗೂ ಅಗತ್ಯವಾಗಿದೆ ಎಂದರು. ಇಲ್ಲಿ ನಿಗದಿಯಾ ಗುವ ದರ ಹಾಗೂ ಕಾರ್ಖಾನೆಯ ಆಸ್ತಿಯನ್ನು ಉಳಿಸುವ ಜವಾಬ್ದಾರಿಯೂ
ಇದೆ. ಇದರ ಬಗ್ಗೆ ತಿಳಿದವರು ಖಾಸಗಿ ಬೇಡ ಎನ್ನುತ್ತಾರೆ. ರೈತರ ಹಿತದೃಷ್ಟಿಗೊತ್ತಿಲ್ಲದವರು ಯಾರಾದರೂ ಅರೆಯಲಿ ಎನ್ನುತ್ತಿದ್ದಾರೆ. ಅದು ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ ಎಂದರು. ಸಭೆಯಲ್ಲಿ ರೈತ ನಾಯಕಿ ಸುನಂದ ಜಯರಾಂ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಕೆ.ಎಸ್.ಸುಧೀರ್ಕುಮಾರ್, ಶಂಭೂನಹಳ್ಳಿ ಕೃಷ್ಣ, ಎಂ.ಬಿ.ಶ್ರೀನಿವಾಸ್, ವಿನಯ್, ಮುದ್ದೇಗೌಡ, ಬೋರಾಪುರ ಶಂಕರೇಗೌಡ ಸೇರಿದಂತೆ ಮತ್ತಿತರರಿದ್ದರು. ಖಾಸಗೀಕರಣ ಮಾಡಲು ಬಿಡಲ್ಲ
ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಜಿಲ್ಲೆಯ ಜನ, ಹೋರಾಟಗಾರರು ಬಿಡುವುದಿಲ್ಲ ಎಂಬುದು ಮುಖ್ಯಮಂತ್ರಿಗೂ
ಮನವರಿಕೆಯಾಗಿದೆ. ಕಬ್ಬು ಸಾಗಾಣೆ ಹಾಗೂ ಕಬ್ಬು ಕಟಾವು ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಬೇಕಾಗಿದೆ. ಇದರ ಬಗ್ಗೆ
ಮಾತುಕತೆ ನಡೆಸಲಾಗುವುದು. ಕಾರ್ಖಾನೆಗಳ ಅಧಿಕಾರಿಗಳನ್ನು ಕರೆದು ಸಾಗಾಣೆ ಹಾಗೂ ಕಟಾವು ಬಗ್ಗೆ ಚರ್ಚಿಸಿ ರೈತರಿಗೆ ಅನುಕೂಲ
ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಪರಿಷತ್ ಸದಸ್ಯಕೆ.ಟಿ.ಶ್ರೀಕಂಠೇಗೌಡ ಹೇಳಿದರು. ಸಭೆ ಕರೆಯುವಂತೆ ಮನವಿ
ಮೇಕೆದಾಟು ಯೋಜನೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ತುರ್ತಾಗಿ ಸಭೆ ಕರೆಯಬೇಕು.ಅಲ್ಲದೆ, ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮೊದಲೇ ಸಭೆ ಕರೆಯುವಂತೆ ಮನವಿ ಮಾಡಲಾಗಿದೆ. ಅದಕ್ಕೆ ಒಪ್ಪಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಸಭೆಯಲ್ಲಿಚರ್ಚೆನಡೆಸಿನಿಮ್ಮೆಲ್ಲರತೀರ್ಮಾನದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು
ಪರಿಷತ್ ಸದಸ್ಯಕೆ.ಟಿ.ಶ್ರೀಕಂಠೇಗೌಡ ವಿವರಿಸಿದರು. ರಾಜಕೀಯ ಬೆರೆಸುವುದು ಬೇಡ
ಮೈಷುಗರ್ ಕಾರ್ಖಾನೆ ಆರಂಭಿಸುವ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷಗಳ
ಮುಖಂಡರು ಒಗ್ಗಟ್ಟಾಗಿ ಹೋಗುವುದು ಒಳ್ಳೆಯದು. ಸಂಸದೆ ಸುಮಲತಾ ಅವರು ಏನೋ ಮಾತನಾಡಿದರು ಎಂದು ನಾವು ಹೇಳಿಕೆ ನೀಡುತ್ತಾ ಹೋದರೆ ರಾಜಕೀಯವಾಗಿ ಬದಲಾಗಲಿದೆ. ಸುಮಲತಾ ಅವರಿಗೂ ಸರ್ಕಾರಿ ಸ್ವಾಮ್ಯದಲ್ಲಿ ನಡೆಸಿದರೆ ರೈತರಿಗೆ ಅನುಕೂಲವಾಗಲಿದೆ ಎಂಬುದು ಮನವರಿಕೆಯಾಗಬೇಕು ಎಂದು ಮುಖಂಡ ಪೊ›.ಜಿ.ಟಿ.ವೀರಪ್ಪ ಹೇಳಿದರು ಜಿಲ್ಲೆಯ ಪ್ರಮುಖ ವಿಚಾರವಾಗಿರುವ ಮೇಕೆದಾಟು ಯೋಜನೆಯನ್ನು ಸರ್ಕಾರ ಶೀಘ್ರ ಜಾರಿಗೊಳಿಸಬೇಕು. ಇದರಬಗ್ಗೆ ಸದನದಲ್ಲೂ ಚರ್ಚೆ
ನಡೆಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಇದ್ದರು. ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಕರ್ನಾಟಕಕ್ಕೆ ಸಿಗುವ ನೀರನ್ನು ಸಮಗ್ರವಾಗಿ ಬಳಸಿಕೊಳ್ಳಲು ಮೇಕೆದಾಟು ಯೋಜನೆ ಅಗತ್ಯವಾಗಿದೆ.
-ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಸದಸ್ಯ