Advertisement
ನಾವು ಸಣ್ಣವರಿದ್ದಾಗ ಹೀಗೆ ಆಗುತ್ತಿರಲಿಲ್ಲ. ನೀಲಿ ಬಣ್ಣದ ರೈನ್ಕೋಟ್ ಬೇಕು ಅಂದರೆ, ಅದು ಸಿಗುವವರೆಗೂ ನಮ್ಮ ಹಠ ನಿಲ್ಲುತ್ತಿರಲಿಲ್ಲ. ಕಡೆಗೆ ನಮ್ಮ ಹಠವೇ ಗೆಲ್ಲುತ್ತಿತ್ತು. ಆದರೆ ಈಗ ಹಾಗೆ ಆಗಿಲ್ಲ. ನಮಗೆ ಜವಾಬ್ದಾರಿಗಳ ಅರಿವಿದೆ. ಅಪ್ಪ ಅಮ್ಮನ ಕಷ್ಟ ಅರ್ಥ ಈಗ ಅರ್ಥವಾಗುತ್ತಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗೋ ಅರ್ಹತೆನೂ ಇಲ್ದೇ ಹೋದ್ರೆ ಅನ್ನೋ ತೊಳಲಾಟ ಇದೆ. ಎಲ್ಲಕ್ಕಿಂತ ಹೆಚ್ಚು ಸಮಾಜದ ಭಯ ತುಂಬಾ ಕಾಡುತ್ತಿರುತ್ತದೆ. ಆದರೆ ಇವೆಲ್ಲದರ ಮಧ್ಯೆ ಆ ಹಠ ಎಲ್ಲಿ ಕಳೆದುಹೋಯ್ತು? ಮುಂಚೆ ಇದ್ದ “ನೀಲಿ ಬಣ್ಣದ್ದೇ ರೈನ್ಕೋಟ್ ಬೇಕು’ ಎಂಬ ನಿಚ್ಚಳವಾದ ಸ್ಪಷ್ಟತೆ ಎಲ್ಲಿ ಮಾಯ ಆಯ್ತು? ವಸ್ತುಗಳನ್ನ ಕೊಂಡು ಕೊಳ್ಳಬೇಕಾದರೆ ಅದೂ ಅಷ್ಟು ಸಣ್ಣ ವಯಸ್ಸಿನಲ್ಲಿ ಇರುತ್ತಿದ್ದ ಸ್ಪಷ್ಟತೆ, ಜೀವನ ಕಟ್ಟಕೊಬೇಕಾದ್ರೇ ಅದೂ ಈ ವಯಸ್ಸಿನಲ್ಲಿ ಇರಬೇಕಲ್ವಾ?ಎಲ್ಲವೂ ನಾವು ಅಂದು ಕೊಂಡಂತೆ ನಡೆಯೋದಿಲ್ಲ ನಿಜ. ಆದರೆ ಸಾಧ್ಯತೆಗಳ ಬಗ್ಗೆ ನಮಗೆ ವಿಶ್ವಾಸವಿದ್ದರೆ ಯಾವುದನ್ನು ತಡೆಯೋಕೆ ಆಗಲ್ಲ. ಕಷ್ಟಪಟ್ಟು ಓದು ಆಮೇಲೆ ಆರಾಮವಾಗಿರಬಹುದು. ಎನ್ನುವ ಅಮ್ಮಂದಿರ ಮಾತು ಸುಳ್ಳು. ನಿಜವಾದ ಪ್ರಶ್ನೆಗಳು, ಕಷ್ಟಗಳು ಶುರುವಾಗುವುದು ಪಿಯುಸಿ ಮುಗಿದ ಮೇಲೆ. ನಮಗೆ ಬೇಕಾದ ಕೋರ್ಸ್, ವಿಷಯಗಳು, ಕಾಲೇಜು ಆರಿಸೋದ್ರಿಂದ ಹಿಡಿದು, ಅಲ್ಲಿ ಏನೋ ಸಾಧಿಸಿದ್ದೇವೆ ಅಂತ ಖುಷಿ ಪಡೋಷ್ಟರಲ್ಲೇ ನಮ್ಮ ಪದವಿ ಜೀವನ ಮುಗಿದಿರುತ್ತದೆ. ಪದವಿಯ ಅನಂತರ ಕೆಲವರು ಜಾಬ್ ಅಂತ ಹೋಗ್ತಾರೆ. ಇನ್ನು ಕೆಲವರು ಮನೆಯಲ್ಲಿರ್ತಾರೆ, ಮತ್ತೂಂದಿಷ್ಟು ಜನ ಮದುವೆ ಆಗ್ತಾರೆ, ಇನ್ನು ಕೆಲವರು ಮುಂದಿನ ಶಿಕ್ಷಣದ ಬಗ್ಗೆ ಯೋಚಿಸ್ತಾರೆ. ಇವೆಲ್ಲದರ ಮಧ್ಯೆ ಬೆರಳೆಣಿ ಕೆಯಷ್ಟು ಜನ ಮಾತ್ರ ತಮ್ಮ ಕನಸುಗಳನ್ನ ನನಸು ಮಾಡಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ಮಧ್ಯೆ ಕನಸುಗಳನ್ನು ಮರೆಯಬೇಡಿ. ನಮ್ಮ ಬದುಕಿನ ನಿರ್ಧಾರಗಳು ನಮ್ಮ ದೇ ಆಗಿರಲಿ. ಯಾಕೆಂದ್ರೆ ಎಲ್ಲರಕ್ಕಿಂತ ಹೆಚ್ಚು ನಮ್ಮ ಬಗ್ಗೆ ನಮಗೆ ಮಾತ್ರ ಗೊತ್ತಿರಲು ಸಾಧ್ಯ.
– ಲಾವಣ್ಯ ಎನ್.ಕೆ. ಎಕೊಸಾಫಿಕಲ್ ಏಸ್ತೆಟಿಕ್ಸ್, ವಿದ್ಯಾರ್ಥಿ, ಮಾಹೆ ಮಣಿಪಾಲ