Advertisement

ಕಾಯ್ದೆ ರೂಪಿಸಿ ಬಿಜೆಪಿ ಮೀಸಲು ಹೆಚ್ಚಿಸಲಿ: ಸಿದ್ದರಾಮಯ್ಯ

11:54 PM Oct 21, 2022 | Team Udayavani |

ರಾಯಚೂರು: ಬಿಜೆಪಿ ಸರಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಕಾಯ್ದೆ ರೂಪಿಸಿಯೇ ಮೀಸಲಾತಿ ಹೆಚ್ಚಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಾಕೀತು ಮಾಡಿದರು.

Advertisement

ತಾಲೂಕಿನ ಗಿಲ್ಲೆಸುಗೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಹೆಚ್ಚಿಸಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಜಾತಿಗನುಗುಣವಾಗಿ ಮೀಸಲಾತಿ ಬೇಕು ಎನ್ನುವ ಕಾರಣಕ್ಕೆ ಮೀಸಲಾತಿ ಹೆಚ್ಚಳ ಬೇಡಿಕೆಯಿತ್ತು. ನಮ್ಮ ಸರಕಾರದ ಅವಧಿಯಲ್ಲಿ ನಾಗಮೋಹನದಾಸ್‌ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗ ವರದಿ ಕೊಟ್ಟಾಗ ನಮ್ಮ ಸರಕಾರ ಆಡಳಿತದಲ್ಲಿರಲಿಲ್ಲ. ವರದಿ ಕೊಟ್ಟು ಆಗಲೇ ಎರಡು ವರ್ಷ ಮೂರು ತಿಂಗಳಾಯಿತು. ಈ ಬಗ್ಗೆ ನಾವು ವರದಿ ಜಾರಿಗೆ ನಿರಂತರ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಇಷ್ಟು ವರ್ಷ ಮಾಡಲೇ ಇಲ್ಲ. ಈಗ ಮಾಡುತ್ತಿದ್ದಾರೆ.

ಅದನ್ನಾದರೂ ಪರಿಪೂರ್ಣವಾಗಿ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಎಲ್ಲ ಪಕ್ಷಗಳ ಸಭೆ ಕರೆದಾಗ ಎಸ್ಸಿಗೆ ಶೆ.17, ಶೇ.7 ಸೇರಿ ಒಟ್ಟು ಶೇ.24ರಷ್ಟು ಆಗಬೇಕೆಂದು ಹೇಳಲಾಗಿತ್ತು. ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಬಾರದು.

ಈಗ ಹೆಚ್ಚಿಸಿರುವ ಮೀಸಲಾತಿ ಪ್ರಕಾರ ಶೇ.66ರಷ್ಟು ನೀಡಬೇಕಾಗುತ್ತದೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next