Advertisement

Hubli; ಕೋರ್ಟ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರಮೋದ ಮುತಾಲಿಕ್

02:17 PM Sep 26, 2024 | Team Udayavani |

ಹುಬ್ಬಳ್ಳಿ: ಕೋರ್ಟ್‌ನಲ್ಲಿ ಯಾರ ವಿರುದ್ಧವೂ ಷಡ್ಯಂತರ ಮಾಡುವುದಕ್ಕೆ ಆಗುವುದಿಲ್ಲ.‌ ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪದ ಬಗ್ಗೆ ಕೋರ್ಟ್ ತೀರ್ಪಿನ ನಂತರವಾದರೂ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ (Pramod Muthalik) ಆಗ್ರಹಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಭಾರಿ ಸದ್ದು ಮಾಡಿತ್ತು. ಈ ಕುರಿತು ದೀರ್ಘವಾಗಿ ಚರ್ಚೆಯಾಗಿತ್ತು.‌ ಆದರೆ, ಇದು ಬಿಜೆಪಿಯ ಷಡ್ಯಂತ್ರವೆಂದು ಸಿದ್ದರಾಮಯ್ಯ, ಕಾಂಗ್ರೆಸ್‌ನವರು ಹೇಳಿದ್ದರು. ಅಹಿಂದ ನಾಯಕ ಎಂದು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರ ಮೇಲೂ ಆರೋಪ ಮಾಡಿದ್ದರು. ಆದರೀಗ ರಾಜ್ಯಪಾಲರಾಗಲಿ, ಬಿಜೆಪಿಯಾಗಲಿ ಆದೇಶ ಮಾಡಿಲ್ಲ.‌ ಕೋರ್ಟ್ ಆದೇಶಿಸಿದೆ. ಅದರ ಪ್ರಕಾರ ಸಿದ್ದರಾಮಯ್ಯ ನಡೆದುಕೊಳ್ಳಬೇಕು.‌ ಕೋರ್ಟ್‌ನಲ್ಲಿ ವಾದ-ವಿವಾದವಾದ ನಂತರ ಆದೇಶ ಬಂದಿದೆ. ಈ ಆದೇಶಕ್ಕೆ ನೀವು ತಲೆಬಾಗಿ ರಾಜೀನಾಮೆ ಕೊಡುವ ಬಗ್ಗೆ ನಿರ್ಧರಿಸಬೇಕು ಎಂದರು.

ತಿರುಪತಿ ಪ್ರಸಾದದ ವಿಚಾರದಲ್ಲಿ ಜಗನ್ ಮೋಹನ ರೆಡ್ಡಿ ತಪ್ಪು ಮಾಡಿದ್ದಾರೆ. ಅವರಿಗೆ ತಿರುಪತಿ ತಿಮ್ಮಪ್ಪನ ಶಾಪ ತಟ್ಟುತ್ತದೆ. ಮೊದಲ ಶಾಪವಾಗಿ ಅವರ ಅಧಿಕಾರ ಹೋಗಿದೆ. ತಿಮ್ಮಪ್ಪನ ಪ್ರಸಾದದಲ್ಲಿ ಕೊಬ್ಬು ಸೇರಿಸಿದ್ದು ಅಕ್ಷಮ್ಯ ಅಪರಾಧ. ಅಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next