Advertisement

Politics: ಮಹದೇವಪ್ಪ ಹೇಳಿಕೆ ಗಂಭೀರವಾಗಿತೆಗೆದುಕೊಳ್ಳಲಿ: ಹರಿಪ್ರಸಾದ್‌

10:51 PM Mar 07, 2024 | Team Udayavani |

ಬೆಂಗಳೂರು: ಎಚ್‌.ಸಿ. ಮಹದೇವಪ್ಪ ಹಿರಿಯ ಸಚಿವರು ಮತ್ತು ದುರ್ಬಲ ವರ್ಗದವರು. ಅದರಲ್ಲೂ ದಲಿತರ ಪರ ಕಾರ್ಯಕರ್ತರಾಗಿದ್ದವರು. “ಮೊದಲಿನಿಂದಲೂ  ವೋಟು ನಮ್ಮದು; ರಾಜ್ಯಭಾರ ನಿಮ್ಮದು’ ಅಂತ ಅವರು ಹೇಳುತ್ತಲೇ ಬಂದಿದ್ದಾರೆ. ಅದು ಸತ್ಯವೂ ಆಗಿದೆ. ಈಗ ಅವರ ಹೇಳಿಕೆಯನ್ನು ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಸೂಚ್ಯವಾಗಿ ಹೇಳಿದರು.

Advertisement

ದಲಿತ ಸಿಎಂ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಬಸವಣ್ಣನವರನ್ನು ನಾವು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಅವರ ಆಶಯದಂತೆ ದಲಿತ ಸಮುದಾಯಕ್ಕೆ ರಾಜ್ಯದಲ್ಲಿ ಅವಕಾಶ ಇದೆ. ಮುಂದಿನ ನಿರ್ಣಾಯಕ ಹಂತದಲ್ಲಿ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next