Advertisement

ಸೈದ್ಧಾಂತಿಕ ಭಿನ್ನಾಭಿಪ್ರಾಯದ ಚರ್ಚೆ ನಡೆಯಲಿ: ಶಾಸಕ ಯು.ಟಿ. ಖಾದರ್‌

11:06 PM Aug 21, 2022 | Team Udayavani |

ದಾವಣಗೆರೆ: ಸಾವರ್ಕರ್‌ ಬಗ್ಗೆ ಇರುವಂತಹ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್‌ ಸ್ವಾತಂತ್ರ್ಯ ಹೋರಾಟದಲ್ಲಿ 14 ವರ್ಷ ಅಂಡಮಾನ್‌ ಜೈಲಿನಲ್ಲಿದ್ದರು ಎಂಬುದು ಗೊತ್ತಿರುವ ವಿಚಾರ. ಆದರೆ ಅವರೊಟ್ಟಿಗೆ 500-600 ಜನರಿದ್ದರು. ಅವರಲ್ಲಿ ಕೆಲವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕೆಲವರು ಲಾಠಿ ಏಠಿಗೆ ಬಲಿಯಾದರು. ಸಾವರ್ಕರ್‌ ಅವರು ನನ್ನನ್ನು ಬಿಟ್ಟು ಬಿಡಿ ಎಂದು 10 ಬಾರಿ ಕ್ಷಮಾಪಣೆ ಪತ್ರ ಬರೆದ ದಾಖಲೆಗಳಿವೆ.

ನೇಣು, ಲಾಠಿ, ಗುಂಡಿಗೆ ಬಲಿಯಾದವರನ್ನು ಹುತಾತ್ಮರೆಂದು ಹೇಳಬೇಕಾ ಅಥವಾ ಕ್ಷಮಾಪಣೆ ಕೇಳಿ ಹೊರಬಂದವರನ್ನು ಹುತಾತ್ಮರು ಎನ್ನಬೇಕಾ ಎಂಬ ಪ್ರಶ್ನೆ ಇದೆ.

ಹಾಗಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದರು. ಸಾವರ್ಕರ್‌ ಅವರದ್ದು ಮಾತ್ರವಲ್ಲ, ಯಾವುದೇ ಫ್ಲೆಕ್ಸ್‌ ಅನ್ನು ಯಾರು ಹರಿದರೂ ತಪ್ಪೇ. ಧಾರ್ಮಿಕ ವಿಚಾರಗಳನ್ನು ಧಾರ್ಮಿಕ ಮುಖಂಡರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next