Advertisement

“ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ’

07:27 PM Mar 06, 2021 | Team Udayavani |

ಮುಂಬಯಿ: ಒಂದು ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆಗಳು ಅದರ ಮೂಲ ವೆಚ್ಚಕ್ಕಿಂತ ಹೆಚ್ಚಾಗಿದೆ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

Advertisement

ಕಳೆದ ಕೆಲವು ತಿಂಗಳುಗಳಿಂದ ಅಡುಗೆ ಅನಿಲದ ಬೆಲೆಯೂ ಹೆಚ್ಚಾಗಿದ್ದು, ಕೇಂದ್ರವು ತತ್‌ಕ್ಷಣವೇ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಹಣದುಬ್ಬರದಿಂದ ಪರಿಹಾರ ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪವಾರ್‌ ಆಗ್ರಹಿಸಿದ್ದಾರೆ. ಪೆಟ್ರೋಲ್‌ನ ಮೂಲ ವೆಚ್ಚ, ಅದರ ಸಂಸ್ಕರಣಾ ವೆಚ್ಚದ ಬಳಿಕ 32.82 ರೂ. ಗಳಾದರೆ, 32.90 ರೂ. ಗಳನ್ನು ಕೇಂದ್ರವು ವಿವಿಧ ತೆರಿಗೆಗಳ ಮೂಲಕ ವಿಧಿಸುತ್ತದೆ. ಈ ತೆರಿಗೆಗಳು ಮೂಲ ಬೆಲೆಗಿಂತ ಹೆಚ್ಚಾಗಿವೆ. ರಾಜ್ಯ ಸರಕಾರವೂ ಪೆಟ್ರೋಲ್‌ಗೆ ತೆರಿಗೆ ವಿಧಿಸಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ, ನಾವು ತೆರಿಗೆ ಹೆಚ್ಚಿಸುವ ಬಗ್ಗೆ ಯೋಚಿಸಿಲ್ಲ. ಹಿಂದಿನ ಸರಕಾರವು ವಿಧಿಸಿದ್ದನ್ನು ನಾವು ಮುಂದುವರಿಸಿದ್ದೇವೆ ಎಂದು ರಾಜ್ಯ ಹಣಕಾಸು ಸಚಿವ ಅಜಿತ್‌ ಪವಾರ್‌ ಹೇಳಿದ್ದಾರೆ.

ವಿಶೇಷವಾಗಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರವು ಹಣದುಬ್ಬರಕ್ಕೆ ತತ್‌ಕ್ಷಣ ಪರಿಹಾರ ಒದಗಿಸಬೇಕು. ಕೋವಿಡ್‌ ಕಾಲದಲ್ಲಿ ಜನರು ಬದುಕುವುದು ಕಷ್ಟಕರವಾಗಿದೆ. ಈ ರೀತಿಯಾಗಿ ಬೆಲೆಗಳು ಹೆಚ್ಚಾದರೆ ಜನರು ಸಹಾಯಕ್ಕಾಗಿ ಎಲ್ಲಿ ಹೋಗಬೇಕು ಎಂದು ಪವಾರ್‌ ಪ್ರಶ್ನಿಸಿದ್ದಾರೆ. ಡಾ| ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿ¨ªಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 106.85 ರೂ.ಗಳಿದ್ದರೂ ಪೆಟ್ರೋಲ್‌ಗೆ 70 ರೂ. ಗಳಿತ್ತು. ಇಂದು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 63 ರೂ. ಗಳಾದರೂ ಪೆಟ್ರೋಲ್‌ ಬೆಲೆ ಲೀಟರ್‌ಗೆ ಸುಮಾರು 100 ರೂ. ಗಳಿಗೆ ತಲುಪಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next