Advertisement

“ಬಿದಿರು ಯೋಜನೆಯಿಂದ ನೀರು ಸಮೃದ್ಧ ಶೇಖರಣೆಯಾಗಲಿ’

08:11 PM Jul 15, 2019 | Sriram |

ಮಂಜೇಶ್ವರ: ಬರಗಾಲದ ಅಪಾಯ ಎದುರಿಸುತ್ತಿರುವ ನಾಡಿಗೆ ನೀರಿನ ಸಿಂಚನ ನೀಡಬಲ್ಲ ಬಿದಿರನ್ನು ಕಾಸರಗೋಡು ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿ ಪರಿವರ್ತಿಸುವ ಜಿಲ್ಲಾಧಿಕಾರಿಯವರ ಯೋಜನೆಯಿಂದ ಮುಂದಿನ ದಿನಗಳಲ್ಲಿ ನೀರು ಸಮೃದ್ಧವಾಗಿ ಶೇಖರಣೆಯಾಗಲೆಂದು ಮಂಜೇಶ್ವರ ಬ್ಲಾ. ಪಂ. ಸದಸ್ಯ ಕೆ.ಆರ್‌. ಜಯಾನಂದ ಹೇಳಿದರು.

Advertisement

ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಪರಿಸರದಲ್ಲಿ ಬಿದಿರು ಸಸಿಯನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಂಜೇಶ್ವರ ಗ್ರಾ.ಪಂ. ಸದಸ್ಯೆ ಸುಪ್ರಿಯಾ ಶೆಣೈ ಅಧ್ಯಕ್ಷತೆ ವಹಿಸಿದರು. ಪ್ರಮುಖರಾದ ಯಾದವ ಕೆ., ರಾಜನ್‌ ನಾಯರ್‌, ಎಂ., ರಾಧಾ, ವಾಸುದೇವ, ಹಮೀದ್‌ ಮಂಜೇಶ್ವರ, ಯೋಗೀಶ್‌ ಕನಿಲ ಶುಭಾಶಂಸನೆಗೈದರು. ಗಿಳಿವಿಂಡು ಆಡಳಿತಾ ಧಿಕಾರಿ ಡಾ| ಕಮಲಾಕ್ಷ ಸ್ವಾಗತಿಸಿದರು. ಬ್ಲಾಕ್‌ ಪಂಚಾಯತ್‌ ಅಧಿಕಾರಿ ಪ್ರಶಾಂತ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next