Advertisement

ಕಾರ್ಕಳ: ಬಾವಿಗೆ ಬಿದ್ದ ಚಿರತೆ ರಕ್ಷಣೆ, ಪಿಲಿಕುಳಕ್ಕೆ ರವಾನೆ

09:42 PM Dec 22, 2022 | Team Udayavani |

ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಶ್ರೀನಿವಾಸ ಆಚಾರ್ಯ ನೆಲ್ಲಿಗುಡ್ಡೆ ಇವರ ಮನೆಯ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಡಿ. 22ರಂದು ರಕ್ಷಿಸಿದ್ದಾರೆ.

Advertisement

ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಭಾಕರ್‌ ಕುಲಾಲ್‌, ಕಾರ್ಕಳ ಗ್ರಾಮಾಂತರ ಎಸ್‌ಐ ತೇಜಸ್ವಿ ಇವರ ಮಾರ್ಗದರ್ಶನದೊಂದಿಗೆ ಸುರಕ್ಷಿತವಾಗಿ ಚಿರತೆಯನ್ನು ಮೇಲಕ್ಕೆತ್ತಲಾಯಿತು. ಕಾರ್ಯಾಚರಣೆಯಲ್ಲಿ ಮುಡಾರು ಗ್ರಾ.ಪಂ. ಅಧ್ಯಕ್ಷ ಸುರೇಶ್‌ ಶೆಟ್ಟಿ, ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ಚಂದ್ರ, ರಾಘವೇಂದ್ರ ಶೆಟ್ಟಿ, ಹುಕ್ರಪ್ಪ ಗೌಡ, ಚಂದ್ರಕಾಂತ ಪೋಳ್‌, ಅರಣ್ಯ ರಕ್ಷಕರಾದ ಮಹಂತೇಶ ಗೋಡಿ, ಸುನಿಲ್‌ ಪಿ., ಅರಣ್ಯ ವೀಕ್ಷಕರಾದ ಬಾಬು ಪೂಜಾರಿ, ಜಗದೀಶ ಸೇರಿಗಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸೆರೆಹಿಡಿಯಲಾದ ಚಿರತೆಯ ಆರೋಗ್ಯ ತಪಾಸಣೆ ನಡೆಸಿ ಅನಂತರ ಪಿಲಿಕುಳ ವನ್ಯಜೀವಿ ಸಂರಕ್ಷಣ ಕೇಂದ್ರಕ್ಕೆ ಬಿಡಲಾಗುವುದೆಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next