Advertisement

ಆಜ್ರಿ: ಚಿರತೆಗೆ 8 ಹಸುಗಳು ಬಲಿ

12:45 AM Jan 24, 2019 | |

ಕೊಲ್ಲೂರು: ಆಜ್ರಿ ಗ್ರಾಮದ ಚೋನಮನೆಯ ಪರಿಸರದಲ್ಲಿ ಕಳೆದ ಹತ್ತು ದಿನಗಳಿಂದ 8 ಹಸುಗಳು ನಾಪತ್ತೆಯಾಗಿದ್ದು, ಚಿರತೆಗೆ ಆಹಾರವಾಗಿರುವ ಶಂಕೆ ವ್ಯಕ್ತವಾಗಿದೆ. ಕೊಡ್ಲಾಡಿ ಗಂಡುಮಕ್ಕಿ, ಚೋನಮನೆ ನಿವಾಸಿ ರಘುರಾಮ ಶೆಟ್ಟಿ ಹಾಗೂ ಕಿರಣ ಶೆಟ್ಟಿ ಆಜ್ರಿ ಅವರು ಉದಯವಾಣಿಗೆ ಮಾಹಿತಿ ನೀಡಿದ್ದು ತಮ್ಮ ಹಾಗೂ ಆಸುಪಾಸಿನ ಮನೆಗಳ ಹಸುಗಳು ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ‘ಸನಿಹದ ಅಭಯಾರಣ್ಯದಿಂದ ಪ್ರತಿ ರಾತ್ರಿ ಗರ್ಜನೆ ಕೇಳಿಬರುತ್ತಿದ್ದು, ಅದು ಚಿರತೆಯ ಗರ್ಜನೆಯಂತಿಲ್ಲ; ಹುಲಿಯ ಗರ್ಜನೆಯಂತಿದೆ. ಅದುವೇ ನಮ್ಮ ಹಸುಗಳನ್ನು ಕೊಂದು ತಿಂದಿರಬೇಕು’ ಎಂದೂ ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ಅರಣ್ಯದಂಚಿನ ಹಸುಗಳು ಕಾಣೆಯಾಗುತ್ತಿರುವುದರಿಂದ ಅರಣ್ಯ ಇಲಾಖೆ ಜಾಗೃತವಾಗಬೇಕು ಮತ್ತು ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪರಿಸರದ ನಿವಾಸಿಗಳು ಆಗ್ರಹಿಸಿದ್ದು, ಮುಂದೆ ಸ್ಥಳೀಯ ಜನರಿಗೂ ಅಪಾಯ ಒದಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next