Advertisement

ಪಡುಕೊಣಾಜೆಯಲ್ಲಿ ಕಾಣಿಸಿಕೊಂಡ ಚಿರತೆ: ಜನರಲ್ಲಿ ಭೀತಿ

11:15 AM Jul 04, 2021 | Team Udayavani |

ಮೂಡುಬಿದಿರೆ: ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಗುರುವಾರ ರಾತ್ರಿ ನಡೆದಿದೆ.

Advertisement

ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ  ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ.

ಇದನ್ನೂ ಓದಿ: ಕಾಸರಗೋಡು: ಮಗುಚಿ ಬಿದ್ದ ಮೀನುಗಾರಿಕೆಗೆ ತೆರಳಿದ್ದ ದೋಣಿ; ಮೂವರು ಮೀನುಗಾರರು ನಾಪತ್ತೆ

ಒಂದಷ್ಟು ದೂರ ಹೋದಾಗ ಚಿರತೆಯ ಬಾಯಿಯಿಂದ ಜಾರಿ ಬಿದ್ದ ನಾಯಿ ಹೇಗಾದರೂ ಮಾಡಿ ಮನೆಗೆ ವಾಪಾಸಾಗಿದೆ.

ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು  ಸಿಬಂಧಿಗಳು ಭೇಟಿ ನೀಡಿದ್ದಾರೆ.ಶಿರ್ತಾಡಿ ಗ್ರಾ.  ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ ನಡೆಸಿ,‌ ಶನಿವಾರ ಬೋನು ಇರಿಸಿದ್ದಾರೆ.

Advertisement

ನಾಯಿ ಅಸ್ವಸ್ಥವಾಗಿ ಮಂಕಾಗಿ ಮೂಲೆ ಸೇರಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next