Advertisement

ಸೋನಿಯಾ ಗಾಂಧಿ ನಗರದ ಬಳಿ ಚಿರತೆ ಪ್ರತ್ಯಕ್ಷ

09:47 PM Jul 05, 2021 | Team Udayavani |

ಗಂಗಾವತಿ:ಆನೆಗೊಂದಿ ಭಾಗದಲ್ಲಿ ಪುನಃ ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು ಸೋಮವಾರ ಸಂಜೆ  ಸೋನಿಯಾಗಾಂಧಿ ನಗರದ ಬಳಿ ಚಿರತೆಯೊಂದು ಗುಡ್ಡದ ಮೇಲೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಈ ಚಿರತೆಯ ಫೋಟೋವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Advertisement

ಆನೆಗೊಂದಿ ಭಾಗದ ಅಂಜನಾದ್ರಿ ಬೆಟ್ಟ ಸೇರಿದಂತೆ ಇತರೆ ಬೆಟ್ಟಗಳಲ್ಲಿ ಕಳೆದ 1 ವರ್ಷಗಳಿಂದ ಚಿರತೆಗಳು ಪ್ರತ್ಯಕ್ಷವಾಗಿದ್ದು ಈಗಾಗಲೇ  ಜನರನ್ನು ಕೊಂದು ಹಾಕಿವೆ ಹಲವು ಜನ ಮತ್ತು ಜಾನುವಾರುಗಳ ಮೇಲೆ ಚಿರತೆಗಳು ದಾಳಿ ನಡೆಸಿವೆ.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸುಮಾರು 3 ಚಿರತೆಗಳನ್ನು  ಬೋನು ಇರಿಸಿ ಸೆರೆಹಿಡಿಯಲಾಗಿದೆ.ಚಿರತೆಯ ಉಪಟಳದಿಂದ ಸುಮಾರು ಇಪ್ಪತ್ತೈದು ದಿನಗಳ ಕಾಲ ಅಂಜನಾದ್ರಿ ಪಂಪಾಸರೋವರ ಆದಿಶಕ್ತಿ ದೇಗುಲಗಳನ್ನು ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಮಾಡಲಾಗಿತ್ತು.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಚಿರತೆಯ ಚಲನವಲನ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next