Advertisement

ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಎರಡು ಚಿರತೆ ಪ್ರತ್ಯಕ್ಷ : ಭೀತಿಯಲ್ಲಿ ಜನತೆ

06:12 PM Apr 03, 2022 | Team Udayavani |

ಪಿರಿಯಾಪಟ್ಟಣ : ತಾಲೂಕಿನ ದೊಡ್ಡ ಬೇಲಾಳು ಗ್ರಾಮದ ಸಮೀಪದ ಅದಾನಿ ಗ್ರೀನ್ ಎನರ್ಜಿ ಸೋಲಾರ್ ಪವರ್ ಪ್ಲಾಂಟ್ ಆವರಣದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿ ಸುತ್ತಮುತ್ತಲಿನ ಜನತೆ ಭೀತಿಗೊಳಗಾಗಿದ್ದಾರೆ.

Advertisement

ಯುಗಾದಿಯ ದಿನದಂದು ಭಾನುವಾರ ಬೆಳಿಗಿನ ಜಾವ 5 ಗಂಟೆಯ ಸಮಯದಲ್ಲಿ ಸೋಲರ್ ಪ್ಲಾಂಟ್ ನಲ್ಲಿ ಎರಡು ಚಿರತೆಗಳು ಭದ್ರತಾ ಸಿಬ್ಬಂದಿಗಳಿಗೆ ಕಾಣಿಸಿಕೊಂಡಿದ್ದು, ಸಿಬ್ಬಂದಿಗಳು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನೆಡೆಸಿ ಸೋಲಾರ್ ಪವರ್ ಪ್ಲಾಂಟ್ ಗೆ ಅಳವಡಿಸಿರುವ ಮುಳ್ಳು ತಂತಿಯನ್ನು ಭೇದಿಸಿ ಹೊರ ಹೋಗುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಹಸಿರು ಹುಲ್ಲು ಇರುವ ಕಾರಣ ಚಿರತೆಗಳು ಅಡಗಿರುವ ಸ್ಥಳಗಳನ್ನು ಪತ್ತೆ ಹಚ್ಚುವಲ್ಲಿ ಯಾವುದೇ ಪ್ರಯೋಜನ ಆಗಲಿಲ್ಲ ಮುಂದಿನ 48 ಗಂಟೆ ಸೋಲಾರ್ ಪ್ಲಾಂಟ್ ಒಳಗಡೆ ಯಾರು ಓಡಾಡ ಬಾರದು ಮತ್ತು ಸೋಲಾರ್ ಪ್ಲಾಂಟ್ ನ ಮುಖ್ಯಬಾಗಿಲನ್ನು ತೆರೆದಿಡುವಂತೆ ಅರಣ್ಯ ಅಧಿಕಾರಿಗಳು ಪ್ಲಾಂಟ್ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು, ಚಿತರೆ ಪ್ರತ್ಯಕ್ಷವಾಗಿರುವಾ ಮಾಹಿತಿ ತಿಳಿದು ಅಕ್ಕ ಪಕ್ಕದ ಗ್ರಾಮಸ್ಥರು ಭಯ ಭೀತರಾಗಿದ್ದರೆ.

ಇದನ್ನೂ ಓದಿ : ಕಡಬ: ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next